ಸಿದ್ದರಾಮಯ್ಯ ಅವರದ್ದು ಕನ್ನಡಿಗರ ಸರಕಾರ ಅಲ್ಲ, ಇದು ತಾಲಿಬಾನಿ ಸರಕಾರ: ಪ್ರತಾಪ್ ಸಿಂಹ ಕಿಡಿ

0
Spread the love

ಮೈಸೂರು: ಸಿದ್ದರಾಮಯ್ಯ ಅವರದ್ದು ಕನ್ನಡಿಗರ ಸರಕಾರ ಅಲ್ಲ, ಇದು ತಾಲಿಬಾನಿ ಸರಕಾರ ಎಂದು  ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಆಡಳಿತ ಹೇಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಸಿದ್ದರಾಮಯ್ಯ ಅವರದು ಕನ್ನಡಿಗರ ಸರಕಾರ ಅಲ್ಲ,

Advertisement

ಇದು ತಾಲಿಬಾನಿ ಸರಕಾರ. ಚುನಾವಣೆ ಸಂದರ್ಭದಲ್ಲೇ ಹೇಳಿದ್ವಿ ಇದು ತಾಲಿಬಾನಿ ಸರ್ಕಾರ ಆಗುತ್ತೆ ಅಂತಾ, ಪೊಲೀಸರು ಆಳುವ ಸರಕಾರದ ಅಣತಿಯಂತೆ ನಡೆಯುವುದು ಮೊದಲು ಬಿಡಬೇಕು ಎಂದು ಪೊಲೀಸ್ ಅಧಿಕಾರಿಗಳ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.

ಪುಂಡ ಮುಸ್ಲಿಂರಿಗೆ ಸಿದ್ದರಾಮಯ್ಯ ಫ್ರೀಯಾಗಿ ಬಿಟ್ಟಿದ್ದಾರೆ. ಅದಕ್ಕೆ ಈ ರೀತಿ ಗಲಾಟೆ ನಡೆದಿದೆ. ಅರವಿಂದ್ ಕೇಜ್ರಿವಾಲ್ ಸೋತರೆ ಉದಯಗಿರಿ ಮುಸ್ಲಿಂರಿಗೆ ಯಾಕೆ ರೋಷ ಬರುತ್ತೆ? ಅವರ ಮನೆಯಲ್ಲಿ ಯಾಕೆ ಸೂತಕ ಬರುತ್ತೆ? ಪುಂಡ ಮುಸ್ಲಿಂರಿಗೆ ಬುದ್ದಿ ಕಲಿಸಿ. ಉದಯಗಿರಿ ವ್ಯಾಪ್ತಿಯಲ್ಲಿ ಪೊಲೀಸರು ಕೂಬಿಂಗ್ ಮಾಡಬೇಕು ಎಂದು ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here