ಭಯೋತ್ಪಾದನೆಯ ಬಗ್ಗೆ ಸಿದ್ಧರಾಮಯ್ಯನವರದ್ದು ಮೃದು ಧೋರಣೆ ಇದ್ದೇ ಇದೆ: ಪ್ರಲ್ಹಾದ್ ಜೋಶಿ

0
Spread the love

ಹುಬ್ಬಳ್ಳಿ : ಭಯೋತ್ಪಾದನೆಯ ಬಗ್ಗೆ ಸಿದ್ಧರಾಮಯ್ಯನವರದ್ದು ಮೃದು ಧೋರಣೆ ಇದ್ದೇ ಇದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ಧರಾಮಯ್ಯ ಅವರು ಇರುವ ತನಕ ಏನೇ ಮಾಡಿದರೂ ನಡೆಯುತ್ತದೆ. ಭಯೋತ್ಪಾದನೆಯ ಬಗ್ಗೆ ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಸಿದ್ಧರಾಮಯ್ಯನವರದ್ದು ಮೃದು ಧೋರಣೆ ಇದ್ದೇ ಇದೆ.

Advertisement

ಯಾವುದೇ ದೇಶದ್ರೋಹದ ಕೇಸ್ ಮಾಡಿದರೂ ಕೇಸ್ ಹಿಂಪಡೆಯುವುದು, ಕೆಜಿ ಹಳ್ಳಿ, ಡಿಜಿ ಹಳ್ಳಿಯಲ್ಲಿನ ಪ್ರಕರಣದಲ್ಲಿ ಭಾಗಿಯಾದವರನ್ನು ಬಿಡುಗಡೆ ಮಾಡುವುದನ್ನು ನೋಡಿದರೆ, ದೇಶದ್ರೋಹದ ಪ್ರಕರಣದಲ್ಲಿ ಮೃದು ಧೋರಣೆ ಇರುವುದು ಗೊತ್ತಾಗುತ್ತದೆ ಎಂದು ಅವರು ಕಿಡಿಕಾರಿದರು.

ಇನ್ನೂ ಸಿದ್ದರಾಮಯ್ಯ ಇರುವ ತನಕ ಕೇಸ್​ ಹಿಂತೆಗೆದುಕೊಳ್ಳುವುದು, ದೇಶದ್ರೋಹ ಮಾಡಿದವರ, ಸಮಾಜದ್ರೋಹ ಮಾಡಿದವರ ಕೇಸ್​ ಹಿಂಪಡೆಯುವುದು. ಅವರು ಇರುವ ತನಕ ವಕ್ಫ್​ ಆಸ್ತಿಯನ್ನ ಬೇಕಾಬಿಟ್ಟಿ ಮಾಡುವುದು, ಕೆಲವೇ ಕೆಲವು ಶಾದಿ ಭಾಗ್ಯಗಳನ್ನ ಮಾಡುವುದು, ಇದೇ ನಿಮ್ಮ ಥಿಯರಿಯೇ ಹಾಗಿದ್ರೆ? ಎಂದು ಪ್ರಶ್ನಿಸಿದರು.


Spread the love

LEAVE A REPLY

Please enter your comment!
Please enter your name here