ಕೊನೆಗೂ ಕಲಾವಿದರ ಬೇಡಿಕೆಗೆ ಮಣಿದ ಸಿದ್ದು ಸರ್ಕಾರ: ಮಾಸಾಶನ ಹೆಚ್ಚಳ

0
Spread the love

ಸಿದ್ದು ಸರ್ಕಾರ ಕಲಾವಿದರಿಗೆ ಗುಡ್‌ ನ್ಯೂಸ್‌ ನೀಡಿದೆ. ಹಲವು ವರ್ಷಗಳಿಂದ ಕಲಾವಿದರ ಮಾಸಾಶನ ಹೆಚ್ಚಸುವಂತೆ ಸರ್ಕಾರದ ಮೇಲೆ ಒತ್ತಡ ಕೇಳಿ ಬಂದಿತ್ತು. ಇದುವರೆಗೂ ಸೈಲೆಂಟ್‌ ಆಗಿದ್ದ ಸರ್ಕಾರ ಕೊನೆಗೂ ಕಲಾವಿದರ ಮನವಿಗೆ ಒಗ್ಗೊಟ್ಟು ಮಾಸಾಶಾನ ಹೆಚ್ಚಳ ಮಾಡಿದೆ.

Advertisement

ಈ ಹಿಂದೆ ಕಲಾವಿದರ ಮಾಸಾಶನ 2000 ರೂಪಾಯಿಗಳಿತ್ತು. ಅದನ್ನು ಹೆಚ್ಚು ಮಾಡುವಂತೆ ಹಲವು ಭಾರಿ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಇದೀಗ ಕಲಾವಿದರ ಮಾಸಾಶನ ಹೆಚ್ಚಿಸಿದ್ದು 2500 ಮಾಡಲಾಗಿದೆ. ಇದಕ್ಕಾಗಿ 32.94 ಕೋಟಿ ಹಣವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಿಡುಗಡೆ ಮಾಡಿದೆ.

ಕಳೆದ ವರ್ಷ ನಾಟಕ ಅಕಾಡೆಮಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ಕಲಾವಿದರ ಮಾಸಾಶನವನ್ನು ಎರಡು ಸಾವಿರದಿಂದ ಮೂರು ಸಾವಿರಕ್ಕೆ ಏರಿಕೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಇದೀಗ 2500 ರೂಪಾಯಿ ಏರಿಕೆ ಮಾಡಲಾಗಿದೆ. ಇದು ಕಲಾವಿದರಿಗೆ ಕೊಂಚ ಅಸಮಾಧಾನವೂ ಆಗಿದೆ. ಅಂದ ಹಾಗೆ ಕಲಾವಿದರಿಗೆ ತಿಂಗಳ ಮಾಸಾಶನವಾಗಿ ಐದು ಸಾವಿರ ರೂಪಾಯಿ ನೀಡಬೇಕು ಎಂಬುದು ಸಂಘದ ಬೇಡಿಕೆ ಆಗಿತ್ತು.


Spread the love

LEAVE A REPLY

Please enter your comment!
Please enter your name here