ಪಾಪ.. ಬಿಜೆಪಿ, ಜೆಡಿಎಸ್ ಪ್ರಾಮಾಣಿಕತೆಯಿಂದ ಸರ್ಕಾರ ನಡೆಸಿದ್ರು: ಸಚಿವ ಹೆಚ್.ಸಿ ಮಹದೇವಪ್ಪ ವ್ಯಂಗ್ಯ

0
Spread the love

ಬೆಂಗಳೂರು: ಬಿಜೆಪಿ, ಜೆಡಿಎಸ್‌’ನವರು ಬಾರೀ ಪ್ರಾಮಾಣಿಕತೆಯಿಂದ ಸರ್ಕಾರ ನಡೆಸಿದ್ದರು ಪಾಪ ಎಂದು ಸಮಾಜ ಕಲ್ಯಾಣ ಇಲಾಖಾ ಸಚಿವ ಹೆಚ್.ಸಿ ಮಹದೇವಪ್ಪ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಭ್ರಷ್ಟ ಸರ್ಕಾರ ಕಿತ್ತೊಗೆಯುತ್ತೇವೆ ಎಂಬ ಹೆಚ್‌ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು,

Advertisement

ಓಹೋ, ಅವರು ಬಾರೀ ಪ್ರಾಮಾಣಿಕರಾ? ಬಿಜೆಪಿ, ಜೆಡಿಎಸ್‌ನವರು ಬಾರೀ ಪ್ರಾಮಾಣಿಕತೆಯಿಂದ ಸರ್ಕಾರ ನಡೆಸಿದ್ದರು ಪಾಪ ಎಂದು ವ್ಯಂಗ್ಯವಾಡಿದರು. ಅಲ್ಲದೇ ಹಾಗೇನಾದ್ರೂ ಇದ್ರೆ ತನಿಖಾ ಸಂಸ್ಥೆಗಳಿವೆ. ಬೇಕಾದರೆ ದಾಖಲೆಗಳನ್ನ ಅದಕ್ಕೆ ಕೊಡಲಿ ಎಂದು ತಿರುಗೇಟು ನೀಡಿದ್ದಾರೆ.

ಪ್ರಜಾಪ್ರಭುತ್ವ, ಸಂವಿಧಾನ, ಒಳ್ಳೆಯ ಆಡಳಿತ ಇದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳೋದೆ ಇಲ್ಲ. ದೇಶದಲ್ಲಿ ದಿನೇ ದಿನೇ ಜನಸಂಖ್ಯೆ ಹೆಚ್ಚುತ್ತಲೇ ಇದೆ. ಇದರ ನಿಯಂತ್ರಣಕ್ಕೆ ಕ್ರಮ ಆಗಬೇಕು. ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರಗಳನ್ನ ಹೆಚ್ಚಿಸಬಾರದು ಎಂದು ಆಗ್ರಹಿಸಿದ್ದಾರೆ. ಇನ್ನು ರಾಜ್ಯದಲ್ಲಿ 99 ದಿನಗಳಲ್ಲಿ ಹೊಸ ಸಮೀಕ್ಷೆ ಮಾಡ್ತಾರೆ. ಸಾಫ್ಟ್ವೇರ್ ಇದೆ, ದತ್ತಾಂಶಗಳಿವೆ. ಶಿಕ್ಷಕರ ಕೊರತೆ ಇದ್ರೆ, ಹೊಸ ಮಾರ್ಗ ಕಂಡುಕೊಳ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here