ಅಗತ್ಯ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಿರಹಟ್ಟಿ ಮೀಸಲು ಮತಕ್ಷೇತ್ರ ವ್ಯಾಪ್ತಿಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಬೇಡಿಕೆಯಿದ್ದು, ಸರಕಾರದಿಂದ ಅನುದಾನ ತರುವ ಮೂಲಕ ರಸ್ತೆ, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

Advertisement

ಅವರು ಶನಿವಾರ ತಾಲೂಕಿನ ಸೂರಣಗಿ ಗ್ರಾಮದ ಪ್ರಗತಿ ಕಾಲೋನಿ ಅಭಿವೃದ್ಧಿ ಯೋಜನೆಯಡಿ 50 ಲಕ್ಷ ರೂ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿ ಮಾತನಾಡಿದರು.

ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿದ್ದ ರಸ್ತೆ ನಿರ್ಮಾಣಕ್ಕೆ ಇದೀಗ ಅನುದಾನ ದೊರಕಿದೆ. ಗುತ್ತಿಗೆದಾರರು ಗ್ರಾಮಸ್ಥರ ಸಹಕಾರದೊಂದಿಗೆ ಗುಣಮಟ್ಟದ ಕಾಮಗಾರಿ ಮಾಡಲು ಸೂಚಿಸಿದ್ದೇನೆ. ಗ್ರಾಮೀಣ ಭಾಗದಲ್ಲಿ ಎಸ್‌ಸಿಪಿ ಯೋಜನೆಯಡಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಯನ್ನು ಮತ್ತು ಸಂಪೂರ್ಣ ಹಾಳಾಗಿರುವ ಸೂರಣಗಿ-ಬೆಳ್ಳಟ್ಟಿ ರಸ್ತೆ ಕಾಮಗಾರಿಯನ್ನು ಶೀಘ್ರದಲ್ಲಿ ಕೈಗೆತ್ತುಕೊಳ್ಳಲಾಗುವುದು ಎಂದು ಹೇಳಿದರು.

ಈ ವೇಳೆ ಗ್ರಾ.ಪಂ ಅಧ್ಯಕ್ಷೆ ಚನ್ನಮ್ಮ ಕಳ್ಳಿಹಾಳ, ಗ್ರಾ.ಪಂ ಸದಸ್ಯರಾದ ಪ್ರವೀಣ ಸೂರಣಗಿ, ತುಕ್ಕಪ್ಪ ಪೂಜಾರ, ಜಗದೀಶಗೌಡ ಪಾಟೀಲ, ಜಾನು ಲಮಾಣಿ, ಶಿವಣ್ಣ ಲಮಾಣಿ, ನಾಗರಾಜ ಹಾವಳಕೇರಿ, ಕುಮಾರ ಬೆಟಗೇರಿ, ಪರಶುರಾಮ ಇಮ್ಮಡಿ, ಪಂಚಾಕ್ಷರಯ್ಯ ಬೆನಕನಹಳ್ಳಿ, ಸೋಮಣ್ಣ ಲಮಾಣಿ, ಕೃಷ್ಣಾ ಲಮಾಣಿ, ಸಂತೋಷ ರಾಠೋಡ, ರಮೇಶ ಹಂಗನಕಟ್ಟಿ, ವೀರೇಶ ಕಳ್ಳಿಹಾಳ, ಬಸವರಾಜ ಇಟಗಿ, ಬಸವರಾಜ ಮೇಲ್ಮರಿ, ಸಂತೋಷ ಬಡಕಲ್, ಸಚಿನ ಮೇಲ್ಮರಿ, ಗಣೇಶ ಲಮಾಣಿ ಅನೇಕರಿದ್ದರು.


Spread the love

LEAVE A REPLY

Please enter your comment!
Please enter your name here