ಕಾಂಗ್ರೆಸ್ ಶಾಸಕರ ಪುತ್ರನ ಹತ್ಯೆಗೆ ಜೈಲಿನಿಂದಲೇ ನಡೆದಿತ್ತಾ ಸ್ಕೆಚ್: ಆಘಾತಕಾರಿ ಮಾಹಿತಿ ಲೀಕ್!

0
Spread the love

ಶಿವಮೊಗ್ಗ:- ಕಾಂಗ್ರೆಸ್ ಶಾಸಕರ ಪುತ್ರನ ಹತ್ಯೆಗೆ ಜೈಲಿನಿಂದಲೇ ನಡೆದಿದ್ದು, ಸ್ವಲ್ಪದರಲ್ಲೇ ಬಚಾವ್ ಆಗಿರುವ ಘಟನೆ ನಡೆದಿದೆ. ಜಿಲ್ಲೆಯ ಭದ್ರಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ವರ ಅವರ ಪುತ್ರ ಬಸವೇಶನ ಹತ್ಯೆಗೆ ಸಂಚು ರೂಪಿಸಲಾಗಿದೆ.

Advertisement

ಜೈಲಿನಲ್ಲಿರುವ ಆರೋಪಿ ಡಿಚ್ಚಿ ಮುಬಾರಕ್ ಎನ್ನುವಾತಲೇ ಬಸವೇಶನ ಹತ್ಯೆಗೆ ಸುಫಾರಿ ನೀಡಿದ್ದು, ಭದ್ರಾವತಿ ಗಾಂಧಿ ಸರ್ಕಲ್ನಲ್ಲಿ ಕೊಲೆ ಮಾಡಲು ಸೂಚಿಸಿದ್ದ ಎಂದು ತಿಳಿದುಬಂದಿದೆ. ಅಲ್ಲದೇ ಹತ್ಯೆಗೆ ಚಾಕು ಖರೀದಿಸಿದ್ದ ಮುಬಾರಕ್, ಕೃತ್ಯಕ್ಕೆ ಕಾರು, ನಾಲ್ವರನ್ನ ಕಳುಹಿಸಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

ಬಸವೇಶನನ್ನು ಕೊಲೆ ಮಾಡುವ ಬಗ್ಗೆ ಮುಬಾರಕ್, ಗುತ್ತಿಗೆದಾರ ಸುನೀಲ್ ಎಂಬಾತನಿಗೆ ಹೇಳಿದ್ದ. ಇದನ್ನು ಸುನೀಲ್, ಮೊನ್ನೆ ಅಂದರೆ ಆಗಸ್ಟ್ 19 ರಂದು ಭದ್ರಾವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸದ್ಯ ಸುನೀಲ್ ನೀಡಿದ ದೂರು ಆಧರಿಸಿ ಭದ್ರಾವತಿ ಹಳೆನಗರ ಠಾಣೆಯ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ

ಡಿಚ್ಚಿ ಮುಬಾರಕ್ನಿಂದ ಹತ್ಯೆ ಸುಫಾರಿ ಪಡೆದುಕೊಂಡಿದ್ದ ಟಿಪ್ಪು ಮತ್ತು ಇತರೆ ನಾಲ್ವರ ವಿರುದ್ಧ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟಿಪ್ಪುನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.


Spread the love

LEAVE A REPLY

Please enter your comment!
Please enter your name here