ಭುವನೇಶ್ವರಿ ಪುತ್ರ

0
Spread the love

ಅನುರೂಪಳಾದ ಭುವನೇಶ್ವರಿ ದೇವಿ
ವಿಶ್ವನಾಥ ದತ್ತರ ಒಲವಿನ ಸ್ಪೂರ್ತಿ
ಮಕರ ಸಂಕ್ರಾಂತಿಯ ತೇಜಸ್ವಿಮೂರ್ತಿ
ನರೇಂದ್ರನಾಥರು
ಸ್ವಾಮಿವಿವೇಕಾ ನಂದರಾದ ಕೀರ್ತಿ (1)

Advertisement

ಬಾಲ್ಯದಲ್ಲಿ ಅಪಾರವಾದ ಪಾಂಡಿತ್ಯ
ಭಾಷಣ, ಹಾಡು, ಕುಸ್ತಿ, ಪಠಣ ಸಾಹಿತ್ಯ
ಹಲವು ಭಾಷಾ, ಪುರಾಣ ಶಾಸ್ತ್ರೀಯ ಸಂಗೀತ
ಆಧ್ಯಾತ್ಮಿಕ ಅರುಣೋದಯದ ಈ ಧೀಮಂತ (2)

ಆದರ್ಶ, ಶಿಸ್ತು, ಸ್ವಯಂ, ವಿಧೇಯತೆ, ಸಂಜ್ಞಾನ, ಕಾಯಕಪ್ರಜ್ಞೆ, ಪ್ರಾಮಾಣಿಕತೆ
ಶಿವನಾಮಸ್ಮರಣೆ, ಜ್ಞಾನ,
ಯೋಗ ಏಕಾಗ್ರತೆ
ಯುವ ಶಕ್ತಿಯ ಸರ್ವಾಂಗೀಣದ ಜಾಗೃತಿ (3)

ದೇಶದ ಸಂಚಾರಿಯಾಗಿ ಉಪದೇಶಾಮೃತ
ಸನಾತನ ಧರ್ಮ ವಿಶ್ವಕೆಲ್ಲ ವಿಸ್ತೃತ
ಸ್ವಾಮಿ ವಿವೇಕಾನಂದರ
ಈ ದಿಟ್ಟ ಆಕೃತಿ
ಭಾರತದ ಸಂಸ್ಕೃತಿಯು ಜಗಕ್ಕೆಲ್ಲ ಪ್ರಖ್ಯಾತಿ (4)

ಜಾಸತ್ಯೆ ವರ್ಣಂ, ಜಾಸತ್ಯೆ ಮರಣ ಧೃವಂ
ಧರ್ಮದ ಪುನರುಜ್ಜೀವನಕ್ಕಾಗಿ ಸದಾ ಸಿದ್ಧಂ
ಅಲ್ಪ ಆಯುಷ್ಯದ ಈ ಯುವ ಗುರೂಜಿ
ದೇಶದ ಭ್ರಾತೃತ್ವದ ಸಂದೇಶ ಸಾರಿದ ಗುರೂಜಿ
ಭುವನೇಶ್ವರಿ ದೇವಿಯ ಹೆಮ್ಮೆಯ ಪುತ್ರ ಸ್ವಾಮಿ ವಿವೇಕಾನಂದ ಜಿ

– ಕುಮಾರಿ ಸುವರ್ಣ ಮಾಳಗಿಮನಿ.
ಬಂಕಾಪುರ.


Spread the love

LEAVE A REPLY

Please enter your comment!
Please enter your name here