ವಿಜಯಸಾಕ್ಷಿ ಸುದ್ದಿ, ಗದಗ: ನೈರುತ್ಯ ರೇಲ್ವೆ ವಲಯದ ಡಿವ್ಹಿಜನಲ್ ರೇಲ್ವೆ ಮ್ಯಾನೇಜರ್ ಬೇಲಾಮೀನಾ ಇವರು ನೂತನವಾಗಿ ಅಧಿಕಾರ ವಹಿಸಿಕೊಂಡು ಪ್ರಥಮವಾಗಿ ಗದಗ ರೇಲ್ವೆ ನಿಲ್ದಾಣದ ವೀಕ್ಷಣೆಗೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ತಾತನಗೌಡ ಎಸ್.ಪಾಟೀಲ ಹಾಗೂ ಜಡ್ಆರ್ಯುಸಿಸಿ ಸಮಿತಿ ಸದಸ್ಯರು, ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ರೇಲ್ವೆ ಉಪ ಸಮಿತಿ ಚೇರಮನ್ ಜಿ.ಕೆ. ಆದಪ್ಪಗೌಡ್ರ ಇವರ ನಿಯೋಗದೊಂದಿಗೆ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮನವಿ ಸಲ್ಲಿಸಿದ ನಿಯೋಗವು, ಸದ್ಯ ಚಲಿಸುತ್ತಿರುವ ಮೇಮೋ ಮತ್ತು ಡೆಮೋ ಹಾಗೂ ವಂದೇ ಭಾರತ್ ರೈಲುಗಳ ವರ್ಕ್ಶಾಪ್ನ್ನು ಹುಬ್ಬಳ್ಳಿ ಅಥವಾ ಗದಗ ನಗರದಲ್ಲಿ ಸ್ಥಾಪಿಸುವುದು, ಬಹುಮುಖ ವಿದ್ಯುತ್ ಚಾಲಿತ ರೈಲುಗಳ ರಿಪೇರಿಗಾಗಿ ವರ್ಕಶಾಪ್ನ್ನು ಹುಬ್ಬಳ್ಳಿ ಅಥವಾ ಗದಗದಲ್ಲಿ ಸ್ಥಾಪಿಸುವದು, ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದರುವ ಹುಬ್ಬಳ್ಳಿ-ಅಂಕೋಲಾ ಹೊಸ ರೈಲ್ವೆ ಮಾರ್ಗ ರಚಿಸುವಲ್ಲಿ ಇರುವ ಅಡಚರಣೆಗಳನ್ನು ನಿವಾರಿಸಿ ಶೀಘ್ರವೇ ರೈಲ್ವೆ ಮಾರ್ಗ ರಚಿಸುವದು, ಪ್ರಗತಿಯಲ್ಲಿ ಇರುವ ಹೊಸ ರೈಲ್ವೆ ಮಾರ್ಗಗಳ ರಚನೆಗಳನ್ನು ಬೇಕಾಗುವ ಹಣಕಾಸು ಹಾಗೂ ಮಾರ್ಗ ರಚನೆಗೆ ಭೂಮಿಯನ್ನು ವಶಪಡಿಸಿಕೊಳ್ಳುವದು, ಹೊಸ ರೈಲು ಮಾರ್ಗ ಸರ್ವೆ ಕಾರ್ಯಗಳಿಗೆ ಮಂಜೂರಾತಿ ನೀಡುವುದು ಇವೇ ಮುಂತಾದ ವಿಚಾರಗಳನ್ನು ಪ್ರಸ್ತಾಪಿಸಿದೆ.
ನಿಯೋಗದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಎಸ್.ಆರ್. ನಾಲತ್ವಾಡಮಠ, ಸಹ ಗೌರವ ಕಾರ್ಯದರ್ಶಿ ಸೋಮನಾಥ ಕೆ.ಜಾಲಿ, ಕೋಶಾಧ್ಯಕ್ಷ ಸಂಜಯ ಸಿ.ಬಾಗಮಾರ ಉಪಸ್ಥಿತರಿದ್ದರೆಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಅಶೋಕಗೌಡ ಕೆ.ಪಾಟೀಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.