ಗದುಗಿನ ವೀರೇಶ್ವರ ಲೈಬ್ರರಿ ಹತ್ತಿರ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಗಣಪತಿಗೆ ವಿಶೇಷ ಪೂಜೆ ನೆರವೇರಿತು. ಗಣ್ಯ ಉದ್ಯಮಿಗಳು ಹಾಗೂ ಬಿಜೆಪಿ ಮುಖಂಡರಾದ ವಿಜಯಕುಮಾರ ಗಡ್ಡಿ ದಂಪತಿಗಳು, ಸಾಗರ್ ಪವಾರ್ ದಂಪತಿಗಳು ಹಾಗೂ ಕಿರಣ ಭಾಂಡಗೆ ದಂಪತಿಗಳು ಮಹಾಗಣಪತಿಗೆ ಪೂಜೆ ಸಲ್ಲಿಸಿ ಕೃತಾರ್ಥರಾದರು. ಈ ಸಂದರ್ಭದಲ್ಲಿ ಗಜಾನನ ಮಂಡಳಿ ಸದಸ್ಯರು ಹಾಗೂ ಹಿಂದೂ ಮಹಾಗಣಪತಿ ಭಕ್ತಾದಿಗಳು ಪಾಲ್ಗೊಂಡಿದ್ದರು.