ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಹುಡ್ಕೋ ಬಡಾವಣೆಯಲ್ಲಿರುವ ಪರಮಹಂಸ ಪರಿವಾಜಕಾರ್ಯ ಶ್ರೀ 108 ಜಗದ್ಗುರು ಸಚ್ಚಿದಾನಂದ ಮಹಾಸ್ವಾಮಿಗಳ ಮಠದ ಜಾತ್ರಾ ಮಹೋತ್ಸವವು ಮಾರ್ಚ್ 29ರಿಂದ ಆರಂಭವಾಗಲಿದೆ ಎಂದು ಕಾರ್ಯದರ್ಶಿ ರವಿಕುಮಾರ ರಡ್ಡಿ ಮಾಹಿತಿ ನೀಡಿದರು.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.29ರಂದು ಪ್ರಣವ ಧ್ವಜಾರೋಹಣ, ಮಧ್ಯಾಹ್ನ 1 ಗಂಟೆಗೆ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ, ಮಾ. 31ರ ಬ್ರಾಹ್ಮಿ ಮೂಹೂರ್ತದಲ್ಲಿ ಸಪ್ತಾಹ ಪ್ರಾರಂಭ, ಪ್ರತಿದಿನ ಬೆಳಗಿನ ಜಾವದಲ್ಲಿ ಶ್ರೀ ಕರ್ತೃಗದ್ದುಗೆಯ ಪೂಜೆ, ಮಹಾಯಜ್ಞ, ಪೂಜೆ ನಡೆಯುವುದು. ಸಂಜೆ 7 ಗಂಟೆಗೆ ಶ್ರೀ ಗುರುಭಜನೆ, ಶಾಸ್ತ್ರ ಪ್ರವಚನ ನಡೆಯುವುದು. ಪ್ರತಿ ದಿನ ಸಾಯಂಕಾಲ ಭಜನೆ ಹಾಗೂ ಸಾಂಸ್ಕೃತಿಕ, ಧಾರ್ಮಿಕ, ಸಂಗೀತ ಕಾರ್ಯಕ್ರಮ ಜರುಗುವುದು ಎಂದು ತಿಳಿಸಿದರು.
ಎಪ್ರಿಲ್ 6ರಂದು ಮುಂಜಾನೆ ಸಕಲ ವಾದ್ಯಗಳೊಂದಿಗೆ ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮಿಗಳವರ ಭಾವಚಿತ್ರದ ಮೆರವಣಿಗೆ ಜರುಗುವುದು. ನಂತರ ಮಧ್ಯಾಹ್ನ 12ಕ್ಕೆ ಸಚ್ಚಿದಾನಂದ ಮಠದ ನಿತ್ಯ ಯೋಗ ಕೇಂದ್ರದ ಮಕ್ಕಳಿಂದ ಹಾಗೂ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವುದು. ಮಧ್ಯಾಹ್ನ 1 ಗಂಟೆಗೆ ಪ್ರಸಾದ ವಿನಿಯೋಗ ನೆರವೇರುವುದು. ಅಂದು ಸಾಯಂಕಾಲ 6 ಗಂಟೆಗೆ ಸಚಿವ ಹೆಚ್.ಕೆ. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಸಚ್ಚಿದಾನಂದಮಠ ಟ್ರಸ್ಟ್ ಕಮಿಟಿ ಅಧ್ಯಕ್ಷ ಶಿವಮೂರ್ತೆಪ್ಪ ವಾಯ್.ಅಗಸಿಮನಿ ಇವರ ನೇತೃತ್ವದಲ್ಲಿ ಮಹಾರಥೋತ್ಸವ ಜರುಗುವುದು.
ಎ.7ರ ಮುಂಜಾನೆ ಕೌದಿ ಪೂಜೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಗುವುದು. ಈ ಪುಣ್ಯ ಕಾರ್ಯಕ್ರಮಕ್ಕೆ ಸಕಲ ಭಕ್ತಾಧಿಗಳು ಬಂದು ಶ್ರೀ ಗುರು ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ರವಿಕುಮಾರ ರಡ್ಡಿ, ಜಾತ್ರಾ ಕಮಿಟಿ ಅಧ್ಯಕ್ಷ ಯಲ್ಲಪ್ಪ ಬದಾಮಿ, ಟ್ರಸ್ಟಿಗಳಾದ ಸಿಕಂದರ ಬಡೇಖಾನ, ಸುರೇಶ ಮುಳಗುಂದ ಹಾಗೂ ಕೃಷ್ಣ ಎಚ್.ಹಡಪದ ಉಪಸ್ಥಿತರಿದ್ದರು.