ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಶ್ರೀ ಏಳು ಮಕ್ಕಳ ತಾಯಿ ದೇವಸ್ಥಾನದ ನೂತನ ಗೋಪುರದ ಕಳಸಾರೋಹಣ, ದೇವಸ್ಥಾನದ ಜಾತ್ರಾ ಮಹೋತ್ಸವ ಮತ್ತು ಶ್ರೀ ಡೋಹರ್ ಕಕ್ಕಯ್ಯನವರ ಜಯಂತ್ಯುತ್ಸವದ ವಿವಿಧ ಧಾರ್ಮಿಕ ಕಾರ್ಯಗಳಿಗೆ ಸೋಮವಾರ ಚಾಲನೆ ನೀಡಲಾಯಿತು.
ಮುಂಜಾನೆ ದೇವಸ್ಥಾನದ ನೂತನ ಕಳಶವನ್ನು ಪಟ್ಟಣದ ಪೇಟೆ ಹಾವಳಿ ಹನುಮಂತದೇವರ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆಯ ಮೂಲಕ ತರಲಾಯಿತು. ಸಮಾಜದ ಯುವಕರು, ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮೆರವಣಿಗೆಯ ಆಕರ್ಷಣೆ ಹೆಚ್ಚಿಸಿದ್ದರು. ನಂತರ ಕರೇವಾಡಿಮಠದ ಶ್ರೀ ಮಳೆ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಕಳಸಾರೋಹಣ ನೆರವೇರಿಸಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಶ್ರೀ ಏಳು ಮಕ್ಕಳ ತಾಯಿ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಪೂರ್ಣಾಜಿ ಖರಾಟೆ, ಎನ್.ಆರ್. ಸಾತಪುತೆ, ಸತೀಶ ನಾರಾಯಣಕರ, ಲಕ್ಷ್ಮೀ ಕಾಂತ ಖರಾಟೆ, ಕಪ್ಪತ್ಸ್ವಾಮಿ ಕರಾಟೆ, ಮಂಜುನಾಥ ಗಜಾಕೋಶ, ರಾಜು ಖರಾಟೆ, ಮಂಜುನಾಥ ಕೆ.ಗಜಾಕೋಶ, ಕಿರಣ ಖರಾಟೆ, ಓಂಕಾರಪ್ಪ ಗಜಾಕೋಶ, ನಾಗೇಂದ್ರಪ್ಪ ಖರಾಟೆ, ಪುರಸಭೆ ಸದಸ್ಯೆ ಪೂಜಾ ಖರಾಟೆ, ಮಂಜವ್ವ ನಂದೆಣ್ಣವರ, ದೀಪಕ್ ಖರಾಟೆ, ಪ್ರವೀಣ ಗಜಾಕೋಶ, ಚಂದ್ರಶೇಖರ ಗಜಾಕೋಶ, ಗೀತಾ ಗಂಗಾಧರ ಕಂದಾರೆ, ರವಿ ಭೋರುಡೆ, ಫಕ್ಕೀರಪ್ಪ ನಾರಾಯಣಕರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.