ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಐತಿಹಾಸಿಕ ಶ್ರೀ ತ್ರಿಕೂಟೇಶ್ವರ ದೇವಸ್ಥಾನದಲ್ಲಿ ಅದ್ವೈತ ಪ್ರಸಾರ ಪರಿಷತ್ತಿನ ವತಿಯಿಂದ ಶ್ರೀ ಶಂಕರಾಚಾರ್ಯ ಜಯಂತಿಯನ್ನು ಆಚಾರ್ಯ ಶಂಕರರಿಗೆ ಪಂಚಾಮೃತ ಅಭಿಷೆಕ, ಅಷ್ಟೋತ್ತರ ಪೂಜೆ ಸಲ್ಲಿಸುವುದರೊಂದಿಗೆ ಅಚರಿಸಲಾಯಿತು.
ಕ್ಷೇತ್ರದ ಅಧಿದೇವತೆ ಶ್ರೀ ಸರಸ್ವತಿ ಹಾಗೂ ಶಂಕರಾಚಾರ್ಯರಿಗೆ ಪ್ರಧಾನ ಅರ್ಚಕರಾದ ರಾಮಣ್ಣ ಪೂಜಾರ ಹಾಗೂ ರಮೇಶಭಟ್ಟ ಪೂಜಾರ ಇವರು ಪೂಜಾ ಕಾರ್ಯವನ್ನು ನೇರವೇರಿಸಿದರು. ಅದ್ವೈತ ಪ್ರಸಾರ ಪರಿಷತ್ತಿನ ಅಧ್ಯಕ್ಷರಾದ ರಾಮಚಂದ್ರ ಮೋನೆಯವರು ಶಂಕರಾಚಾರ್ಯರ ಸಾಧನೆ ಹಾಗೂ ಅವರು ವೈದಿಕ ಸನಾತನ ಧರ್ಮವನ್ನು ಹೇಗೆ ರಕ್ಷಿಸಿದರು, ಸದ್ಯದ ಕಲುಷಿತ ಸಮಾಜಕ್ಕೆ ದ್ವೇಷಮುಕ್ತ ಸಾಮರಸ್ಯ ಜೀವನ ನಡೆಸಲು 8ನೇ ಶತಮಾನದಲ್ಲಿಯೇ ಸುಲಭ ಮಾರ್ಗ ತೊರಿಸಿದ್ದರು ಎಂದು ತಿಳಿಸಿದರು.
ಗಣಪತಿ ಕೌಜಲಗಿ ಸ್ವಾಗತಿಸಿದರೆ, ರವಿ ಪೂಜಾರ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಪಾಂಡುರAಗ ಭಟ್ಟ ಪೂಜಾರ, ವಿಶಾಲ ಜೋಶಿ, ಅಕ್ಷಯ ಅಲಬೂರ, ಶ್ರೀಕಾಂತ ಹಬೀಬ, ವೆಂಕಟೇಶ ಪೂಜಾರ, ದನಂಜಯ ಪೂಜಾರ, ಸುಧಾ ಮೋನೆ, ವಾಣಿ ಪೂಜಾರ, ತನ್ವೀ ಮೋನೆ ಮುಂತಾದವರು ಭಾಗವಹಿಸಿದ್ದರು.