ಶ್ರೀ ವೀರಪ್ಪಜ್ಜನವರ ಭಾವಚಿತ್ರ ಮೆರವಣಿಗೆ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕೋಡಿಕೊಪ್ಪದ ಹಠಯೋಗಿ ಶ್ರೀ ವೀರಪ್ಪಜ್ಜನವರ ಪುಣ್ಯಾರಾಧನೆಯ ಶತಮಾನೋತ್ಸವದ ನಿಮಿತ್ತ ಪಟ್ಟಣದಲ್ಲಿ ನಡೆದ ಶ್ರೀ ವೀರಪ್ಪಜ್ಜನವರ ಭಾವಚಿತ್ರದ ಮೆರವಣಿಗೆಯು ಭಕ್ತರ ಕಣ್ಮನಗಳಲ್ಲಿ ಸಂತೋಷವನ್ನು ತುಂಬಿತು.

Advertisement

ಪಟ್ಟಣದ ಸಂತೆ ಬಜಾರನಲ್ಲಿರುವ ಶ್ರೀ ಗಣಪತಿ ದೇವಸ್ಥಾನದಿಂದ ಹೊರಟ ಮೆರವಣಿಗೆಗೆ ನಿಡಗುಂದಿಕೊಪ್ಪದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳವರು ಚಾಲನೆ ನೀಡಿದರು.

ಮೆರವಣಿಗೆ ಮುಂದೆ ಕುಂಭ ಹೊತ್ತ ಮಹಿಳೆಯರು, ಅಂಬೇಡ್ಕರ ನಗರದ ಯುವಕರ ಕೋಲಾಟ, ಡೊಳ್ಳು ಭಜನೆಯೊಂದಿಗೆ ಮೆರವಣಿಗೆಗೆ ವಿಶೇಷ ಕಳೆ ನೀಡಿದರು.

ರೋಣ ಬೂದೀಶ್ವರ ಮಠದ ಡಾ. ವಿಶ್ವನಾಥ ಸ್ವಾಮಿಗಳು ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆ ಈರಣ್ಣನ ಪಾದಗಟ್ಟಿ, ಭಾಗ್ಯ ನಗರದಿಂದ ಮಾರಿಕಾಂಬ ದೇವಸ್ಥಾನ, ಹಳೆ ಬಸ್‌ನಿಲ್ದಾಣ, ಮುಖ್ಯ ಬಸ್ ನಿಲ್ದಾಣದಿಂದ ಕೋಡಿಕೊಪ್ಪ ಮಾರ್ಗವಾಗಿ ಶ್ರೀ ವೀರಪ್ಪಜ್ಜನವರ ಮಠಕ್ಕೆ ತಲುಪಿ ಸಂಪನ್ನಗೊAಡಿತು.

ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತರಿಗಾಗಿ ಶ್ರೀ ಕಟ್ಟಬಸವೇಶ್ವರ ಓಣಿಯ ಸಾರ್ವಜನಿಕರು ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದ್ದರು. ಶ್ರೀ ವೀರಪ್ಪಜ್ಜನ ಮಠದ ಟ್ರಸ್ಟ್ ಕಮಿಟಿಯ ಸದಸ್ಯರು, ಪಟ್ಟಣದ ಅನೇಕ ಗಣ್ಯರು, ಮಜಿರೆ ಹಳ್ಳಿಗಳ ನಾಗರಿಕರು ಉತ್ಸಾಹದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here