ಭೀಮಾ ನದಿಗೆ ಈಜಲು ತೆರಳಿ ನೀರು ಪಾಲಾದ SSLC ವಿದ್ಯಾರ್ಥಿ!

0
Spread the love

ಕಲಬುರಗಿ:- ಜಿಲ್ಲೆಯ ಜೇವರ್ಗಿ ತಾಲೂಕಿನ ಹರವಾಳ ಬಳಿ ಭೀಮಾ ನದಿಯಲ್ಲಿ ಈಜಲು ತೆರಳಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಜರುಗಿದೆ.

Advertisement

16 ವರ್ಷದ ಪ್ರಜ್ವಲ್ ಹರವಾಳ ಮೃತ ದುರ್ದೈವಿ. ಎರಡು ದಿನಗಳ ರಜೆಯ ಕಾರಣ ಪ್ರಜ್ವಲ್ ಸ್ವಗ್ರಾಮ ಹರವಾಳಕ್ಕೆ ಬಂದಿದ್ದ. ಈ ವೇಳೆ ಸ್ನೇಹಿತರೊಂದಿಗೆ ಸೇರಿ ಭೀಮಾ ನದಿಗೆ ಈಜಲು ತೆರಳಿದ್ದ. ನೀರಿನ ಆಳ ಲೆಕ್ಕಿಸದೇ ನದಿಗೆ ಇಳಿದ ಪರಿಣಾಮ ನೀರು ಪಾಲಾಗಿದ್ದಾನೆ.

ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ, ತೀವ್ರ ಶೋಧ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ.

ಮೃತದೇಹ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ..


Spread the love

LEAVE A REPLY

Please enter your comment!
Please enter your name here