ST ಮೀಸಲಾತಿ ಹೋರಾಟ ಯಾರ ವಿರುದ್ಧ, ಈಶ್ವರ ವರ್ಸೆಸ್ ಈಶ್ವರಪ್ಪನಾ? ಅಥವಾ ಈಶ್ವರಪ್ಪ ವರ್ಸೆಸ್ ಯಡಿಯೂರಪ್ಪನಾ?: ಸಿದ್ದರಾಮಯ್ಯ ಪ್ರಶ್ನೆ

0
Spread the love

ವಿಜಯಸಾಕ್ಷಿ ಸುದ್ದಿ, ರಾಯಚೂರು

Advertisement

ಕುರುಬರಿಗೆ ST ಮೀಸಲಾತಿ ನೀಡುವುದಕ್ಕೆ ನನ್ನ ವಿರೋಧವಿಲ್ಲ.
ಆದರೆ, ಈಗಿನ ST ಮೀಸಲಾತಿ ಹೋರಾಟದಲ್ಲಿ ರಾಜಕೀಯ ಇದ್ದು, ಇದರ ಹಿಂದೆ RSS ಇರುವ ಕಾರಣಕ್ಕೆ ನಾನು ವಿರೋಧಿಸುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದರು.

ದೇವದುರ್ಗ ತಾಲೂಕಿನ ‌ತಿಂಥಣಿಯಲ್ಲಿ ನಡೆದ ಹಾಲುಮತ ಉತ್ಸವದಲ್ಲಿ ಭಾಗವಹಿಸುವುದಕ್ಕೂ ಮುನ್ನ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಿನ ಹೋರಾಟ ಯಾರ ವಿರುದ್ಧ ಈಶ್ವರ ವರ್ಸೆಸ್ ಈಶ್ವರಪ್ಪನಾ?
ಅಥವಾ ಈಶ್ವರಪ್ಪ ವರ್ಸೆಸ್ ಯಡಿಯೂರಪ್ಪನಾ? ಎಂದು ಪ್ರಶ್ನಿಸಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಅವರದ್ದೇ ಸರ್ಕಾರವಿದೆ. ಯಾಕೆ ಒತ್ತಡ ಹೇರಿ ಮೀಸಲಾತಿ ಕೊಡಿಸಬಾರದು. ನಾನು ಸಿಎಂ ಇದ್ದಾಗ ನಾಲ್ಕು ಜಿಲ್ಲೆಗಳಲ್ಲಿ ಕುರುಬರಿಗೆ ST ಮೀಸಲಾತಿ ನೀಡಿದ್ದೇನೆ.ಕುರುಬ ಸಮಾಜವನ್ನು ಒಡೆಯುವ ಪ್ರಯತ್ನ ನಡೆದಿದೆ, ಆದರೆ ಅದು ಆಗುವುದಿಲ್ಲ. ಈಶ್ವರಪ್ಪ ಕುರುಬ ಸಮಾಜದ ನಾಯಕರಾಗಲು ಹೊರಟಿದ್ದಾರೆ ಅದು ಸಾಧ್ಯವಿಲ್ಲ ಎಂದು ಈಶ್ವರಪ್ಪ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.


Spread the love

LEAVE A REPLY

Please enter your comment!
Please enter your name here