ಚಿತ್ರದುರ್ಗ: ಮಹಾ ಕುಂಭಮೇಳದಲ್ಲಿ ಘೋರ ದುರಂತ ಸಂಭವಿಸಿಬಿಟ್ಟಿದೆ. ಪುಣ್ಯಕ್ಷೇತ್ರದಲ್ಲಿ ಅಮೃತ ಸ್ನಾನ ಮಾಡಲು ಹೋದವರು ಶಿವನ ಪಾದ ಸೇರಿದ್ದಾರೆ. ದೇವರ ಸ್ಮರಣೆಗಳು ಕೇಳಬೇಕಿದ್ದ ಕ್ಷೇತ್ರದಲ್ಲಿ ಸಾವಿನ ಆರ್ತನಾದ ಕೇಳಿಸಿದೆ. ಪ್ರಯಾಗರಾಜ್ನ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 30 ಜನ ಸಾವನ್ನಪ್ಪಿದ್ದಾರೆ. ಬೆಳಗಾವಿ ಮೂಲದ ಜ್ಯೋತಿ ಹತ್ತರವಾಠ,
ಪುತ್ರಿ ಮೇಘಾ, ಅರುಣ್ ಹಾಗೂ ಮಹಾದೇವಿ ಅನ್ನೋ ನಾಲ್ವರು ಸಾವನ್ನಪ್ಪಿದ್ದು, ನಿನ್ನೆ ಮೃತದೇಹಗಳನ್ನುವಿಮಾನದ ಮೂಲಕ ಬೆಳಗಾವಿ ಏರ್ಪೋರ್ಟ್ಗೆ ತಂದು ಬಳಿಕ ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರು ಅಂತ್ಯಸಂಸ್ಕಾರ ಮಾಡಿದರು. ಇದರ ಬೆನ್ನಲ್ಲೇ ಕರ್ನಾಟಕ ಮೂಲದ ನಾಗಸಾಧು ಒಬ್ಬರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಾಜನಾಥ್ ಮಹಾರಾಜ್(49) ಮೃತ ದುರ್ಧೈವಿಯಾಗಿದ್ದಾರೆ.
ಮೃತ ನಾಗಸಾಧು ರಾಜನಾಥ್ ಅವರು ಬಂಜಾರ ಗುರುಪೀಠದ ಪೀಠಾಧಿಪತಿ ಸರ್ಧಾರ್ ಸೇವಾಲಾಲ್ ಶ್ರೀ ಒಡನಾಡಿಯಾಗಿದ್ದರು. ಇವರು ಕಳೆದ 7 ವರ್ಷಗಳಿಂದ ಚಿತ್ರದುರ್ಗದ ಬಂಜಾರ ಗುರು ಪೀಠದಲ್ಲಿ ನೆಲೆಸಿದ್ದರು. ಬಂಜಾರ ಗುರು ಪೀಠದಲ್ಲಿ ನೆಲೆಸಿದ್ದರು. ಕಳೆದ 15 ದಿನದ ಹಿಂದೆ ಅಷ್ಟೇ ಮಹಾಕುಂಭಮೇಳಕ್ಕೆ ಹೋಗಿದ್ದರು ಎಂದು ತಿಳಿದುಬಂದಿದೆ.