ಚಿಕ್ಕಬಳ್ಳಾಪುರ:- ಬೆಂಗಳೂರಿನ ಚಿನ್ನಸ್ವಾಮಿ ಕಾಲ್ತುಳಿತದ ದುರಂತಕ್ಕೆ ಸಂಬಂಧಿಸಿದಂತೆ ಸಚಿವ ಎಂಸಿ ಸುಧಾಕರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕಾಲ್ತುಳಿತ ಘಟನೆಯಿಂದ ಸಿಎಂ ಸಿದ್ದರಾಮಯ್ಯ ಬಹಳ ನೊಂದಿದ್ದಾರೆ, ನಮಗೆಲ್ಲಾ ಬಹಳ ದುಃಖ ಆಗಿದೆ. ಸಿಎಂ ಅಂತೂ ಬಹಳ ನೋವು ತಿಂದಿದ್ದಾರೆ. ಸರ್ಕಾರ ತನಿಖೆ ಮಾಡುತ್ತಿದೆ. ಸತ್ಯಾಸತ್ಯತೆ ಬಂದ ಮೇಲೆ ಖಂಡಿತ ಕ್ರಮ ತೆಗೆದುಕೊಳ್ಳುತ್ತಾರೆ. ಸತ್ತವರ ಜೀವ ತಂದುಕೊಡಲು ಸಾಧ್ಯ ಇಲ್ಲ, ಕುಟುಂಬ ಸದಸ್ಯರ ನೋವು ಮರೆಸಲು ಸಾಧ್ಯವಿಲ್ಲ ಎಂದರು.
ಇನ್ನೂ ನನ್ನ ಕ್ಷೇತ್ರದಲ್ಲಿ ಇಬ್ಬರು ಹುಡುಗರ ಸಾವಾಗಿದೆ. ನನಗೂ ನೋವಾಗಿದೆ. ನಾನು ಸಹ ಕ್ರಿಕೆಟ್ ಆಟಗಾರ ಪ್ರೇಮಿ, ವಿಶ್ವಕಪ್ ಪಂದ್ಯ ಗೆದ್ದಾಗಲೂ ಈ ರೀತಿ ಸಂಭ್ರಮ ಇರುತ್ತಿರಲಿಲ್ಲ. ಆದರೆ ಪ್ರೀಮಿಯರ್ ಲೀಗ್ಗೆ ಜನ ಈ ರೀತಿ ಸಂಭ್ರಮ ಮಾಡುತ್ತಾರೆ. ಮೈಮರೀತಾರೆ ಅನ್ನೋದು ನಾನು ನೋಡಿಲ್ಲ. ಹಳ್ಳಿಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಐಪಿಎಲ್ ಆಪರೇಷನ್ ಸಿಂಧೂರದಿಂದ ಕೆಲ ಸಮಯ ವಿಳಂಬ ಆಯಿತು. ಹಾಗಾಗಿ ಆರ್ಸಿಬಿ ಮ್ಯಾನೇಜ್ಮೆಂಟ್ ಆಟಗಾರರ ಕಮಿಟ್ಮೆಂಟ್ನಿಂದ ಸಂಭ್ರಮಾಚರಣೆ ತೀರ್ಮಾನ ಮಾಡಿದ್ದು ನಾವಲ್ಲ ಎಂದರು.