ತಾರಕಕ್ಕೇರಿದ ಹಾಲಿ-ಮಾಜಿ ಶಾಸಕರ ಟಾಕ್ ಫೈಟ್: ಸುರೇಶ್ ಗೌಡ ವಿರುದ್ದ ಗೌರಿಶಂಕರ್ ವಾಗ್ದಾಳಿ

0
Spread the love

ತುಮಕೂರು: ತುಮಕೂರಿನಲ್ಲಿ ಹಾಲಿ-ಮಾಜಿ ಶಾಸಕರ ಟಾಕ್ ಫೈಟ್ ತಾರಕಕ್ಕೇರಿದ್ದು, ಗ್ರಾಮಾಂತರ ಶಾಸಕ ಸುರೇಶ್ ಗೌಡ ವಿರುದ್ದ ಮಾಜಿ ಶಾಸಕ ಗೌರಿಶಂಕರ್ ವಾಗ್ದಾಳಿ ನಡೆಸಿದ್ದಾರೆ. ತುಮಕೂರಲ್ಲಿ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಸುದ್ದಿಗೋಷ್ಠಿ ನಡೆಸಿ ಮೊದಲು ಪುಲ್ವಾಮಾದಲ್ಲಿ ಮರಣ ಹೊಂದಿದ ಯೋಧರನ್ನ ನೆನೆದಿದ್ದಾರೆ.

Advertisement

ನಂತರ ರಾಜಣ್ಣರ ಬಗ್ಗೆ ಮಾತನಾಡುವ ಮೂಲಕ ಕಾಂಗ್ರೆಸ್​ನಲ್ಲಿ ಎಲ್ಲವೂ ಸರಿಯಿಲ್ಲ ಎಂಬಂತೆ ಬಿಂಬಿಸಲು ಹೊರಟಿದ್ದಾರೆ. ಗೃಹ ಸಚಿವ ಜೀ. ಪರಮೇಶ್ವರ್ ಪರವಾಗಿ ನಾನು ಮಾತನಾಡುತ್ತಿದ್ದೆನೆ ಎಂದಿದ್ದಾರೆ.‌ ರಾಜಣ್ಣ ಅವರ ಆಶಿರ್ವಾದ ಇಲ್ಲದಿದ್ದರೆ, ಚುನಾವಣೆಯಲ್ಲಿ ಗೆದ್ದು ನೀನು ಶಾಸಕನಾಗಲು ಆಗುತ್ತಿರಲಿಲ್ಲ. ಸುರೇಶ್ ಗೌಡವರಿಗೆ ಯಾಕೆ‌ ಇಷ್ಟು ಬಂಡತನ ಎಂದು ವಾಗ್ದಾಳಿ ಮಾಡಿದ್ದಾರೆ.

ನನ್ನ ‌ಕ್ಷೇತ್ರದಲ್ಲಿ ಒಂದೇ ಒಂದು ರಸ್ತೆ ಗುಂಡಿ ‌ಬಿದ್ದಿಲ್ಲ‌ ಎಂದಿದ್ದಾರೆ. ಹಿರೆಹಳ್ಳಿಯಿಂದ ಹರಳೂರು ರಸ್ತೆ ಸಂಪೂರ್ಣ ಹದಗೆಟ್ಟಿದೆ. ಎಷ್ಟು ಕಮಿಷನ್ ಪಡೆದುಕೊಂಡಿದ್ದೀರಿ. ಫಿಕ್ಸಿಂಗ್ ಪಾಲಿಟಿಕ್ಸ್​ನಲ್ಲಿ ಸುರೇಶ್ ಗೌಡ ನಂ 1. ಅಧಿಕಾರ ಸಿಗುತ್ತೆ ಅಂದರೆ ಯಾರ ಮನೆಗೆ ಬೇಕಾದರೂ ಹೋಗುತ್ತಾನೆ. ನಾನು, ನಂದು ಎಂದವರು ಮಣ್ಣಾಗಿ ಹೋಗಿದ್ದಾರೆ.

ನಾನು ಚುನಾವಣೆ ಎದುರಿಸಿದ್ದೇನೆ, ಶಾಸಕನಾಗಿದ್ದೇನೆ. ನಾನು ಹುಟ್ಟಿದಾಗಲೇ ನಮ್ಮಪ್ಪ ನನ್ನ‌ ಹಿಂದೂ ಎಂದು ಬರೆಸಿದ್ದಾರೆ. ನಿನಗೆ ಮುಸ್ಲಿಂ, ಕ್ರಿಶ್ಚಿಯನ್ ಹೆಸರು ಹೇಳದಿದ್ದರೆ ನಿದ್ದೆ ಬರಲ್ಲ. ಟೀಕೆ, ಟಿಪ್ಪಣಿಗಳು ಸಾಯ್ತವೆ, ನಾವು ಮಾಡಿದ ಕೆಲಸಗಳು ಅಜರಾಮರವಾಗಿ ಉಳಿಸುತ್ತವೆ ಎಂದು ನಮ್ಮ‌ ಕೆಪಿಸಿಸಿ ಅಧ್ಯಕ್ಷರು ಹೇಳುತ್ತಿರುತ್ತಾರೆ. ನಮ್ಮ ಪರಮೇಶ್ವರ್ ಸಾಹೇಬ್ರು ಸಜ್ಜನ ರಾಜಕಾರಣಿ, ಅವರ ಆದರ್ಶಗಳನ್ನ ನೀನು ಕಳಿತುಕೊ ಎಂದಿದ್ದಾರೆ.


Spread the love

LEAVE A REPLY

Please enter your comment!
Please enter your name here