ವಿಜಯಸಾಕ್ಷಿ ಸುದ್ದಿ, ಗದಗ: ಗೌತಮ ಬುದ್ಧ ಸೇವಾ ಸಮಿತಿ ಗದಗ ಮತ್ತು ವೇರಿಗುಡ್ ಮಾರ್ನಿಂಗ್ ಪತ್ರಿಕಾ ಬಳಗದ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರರ 134ನೇ ಜಯಂತ್ಯುತ್ಸವದ ಅಂಗವಾಗಿ ರಾಜ್ಯ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ `ಜ.ತೋ.ಡಾ.ಸಿದ್ದಲಿಂಗ ಶ್ರೀ ಟ್ರೋಫಿ-2025, ಉಚಿತ ಆರೋಗ್ಯ ತಪಾಸಣೆ, ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಎಪ್ರಿಲ್13 ಹಾಗೂ 14ರಂದು ರಾಜೀವಗಾಂಧಿ ನಗರದ ಸರ್ಕಾರಿ ಶಾಲೆ ನಂ.8ರ ಆವರಣದಲ್ಲಿ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕೆ ಕಾನೂನು ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತವಾರಿ ಸಚಿವರಾದ ಡಾ. ಹೆಚ್.ಕೆ. ಪಾಟೀಲರನ್ನು ಆಹ್ವಾನಿಸಲಾಗುವುದು. ಸಂಸದರಾದ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ತೋಟದಾರ್ಯ ಮಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ, ಜಿ.ಪಂ ಮಾಜಿ ಅಧ್ಯಕ್ಷ ಸಿದ್ದಲಿಂಗೇಶ ಪಾಟೀಲ, ವಾಕರಸಾ ಸಂಸ್ಥೆಯ ಉಪಾಧ್ಯಕ್ಷ ಪೀರಸಾಬ ಕೌತಾಳ, ಯೂಥ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೃಷ್ಣಗೌಡ ಹೆಚ್.ಪಾಟೀಲ, ನಗರಸಭೆಯ ಸದಸ್ಯರಾದ ಎಲ್.ಡಿ. ಚಂದಾವರಿ, ಸುರೇಶ ಕಟ್ಟಿಮನಿ, ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆಯ ರಾಜ್ಯಾಧ್ಯಕ್ಷ ಸುರೇಶ ಕಂಠಿ ಮುಂತಾದ ಮುಖಂಡರುಗಳನ್ನ ಆಹ್ವಾನಿಸಲಾಗುವುದು ಎಂದು ಗೌತಮ ಬುದ್ಧ ಸೇವಾ ಸಮಿತಿ ಅಧ್ಯಕ್ಷ ದೇವಪ್ಪ ಎನ್.ಲಿಂಗದಾಳ ತಿಳಿಸಿದ್ದಾರೆ.
ಪಂದ್ಯಾವಳಿಯಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳುವ ತಂಡಗಳು ಎಪ್ರಿಲ್ 12ರ ಒಳಗಾಗಿ ಕ್ರೀಡಾ ಸಮಿತಿಯ ಬಸವರಾಜ ಬದಾಮಿ, ದೇವಪ್ಪ ಎನ್.ಲಿಂಗದಾಳ, ಶ್ರೀನಿವಾಸ್ ಹುಯಿಲಗೋಳ, ಪ್ರಕಾಶ ಕೆಲೂರು, ಮಂಜುನಾಥ ಲಿಂಗದಾಳ, ಸಂತೋಷ ಕಲ್ಯಾಣಿ, ಡ್ಯಾನಿಯಲ್ ಗೋವಿನಕೊಪ್ಪ ಅಥವಾ ಕಮಿಟಿಯವರನ್ನು 9902221594-979739051180-9972949768-7019100570-7026458149-8147422519 ಈ ಸಂಖ್ಯೆಗಳಲ್ಲಿ ಸಂಪರ್ಕಿಸಬಹುದಾಗಿದೆ.
ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ಪಾರಿತೋಷಕದೊಂದಿಗೆ 15000ರೂ, ದ್ವಿತೀಯ ಬಹುಮಾನ 10000 ರೂ, ತೃತೀಯ ಬಹುಮಾನ 7000 ರೂ, ಚತುರ್ಥ ಬಹುಮಾನ 5000 ರೂ, ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ ಹಾಗೂ ಉತ್ತಮ ತಂಡಕ್ಕೆ ಬಹುಮಾನ ನೀಡಲಾಗುವುದು.