ಕೋಲಾರ:- ಜಿಲ್ಲೆಯ ಮುಳಬಾಗಿಲು ನಗರದ ರೆಹಮತ್ ನಗರದಲ್ಲಿ ತಾಯಿಗೆ ಮಲ ತಂದೆ ವಿಚ್ಛೇದನ ನೀಡಿದ್ದಕ್ಕೆ ನೊಂದು ಮಗ ಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ ಜರುಗಿದೆ.
25 ವರ್ಷದ ಅಫ್ನಾನ್ ನೇಣಿಗೆ ಶರಣಾದ ಮಗ. ತಾಯಿ ಜಬೀನ್ ತಾಜ್ಗೆ ಮಲ ತಂದೆ ಅಕ್ಬರ್ ಆಲಿ ತಲಾಖ್ ಕೊಟ್ಟು ಬೇರೆ ಮದುವೆ ಮಾಡಿಕೊಂಡಿದ್ದಾರೆ. ಈ ವಿಚಾರವಾಗಿ ಅಫ್ನಾನ್ ಸಂಬಂಧಿಕರೊಂದಿಗೆ ಗಲಾಟೆ ಮಾಡಿಕೊಂಡಿದ್ದ. ಇದರಿಂದ ಮನನೊಂದು ಮನೆಯಲ್ಲೇ ಅಫ್ನಾನ್ ನೇಣಿಗೆ ಶರಣಾಗಿದ್ದಾರೆ.
ಮುಳಬಾಗಿಲು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.



