ನನ್ನ ಮೇಲೆ ಜಿ ಟಿ ದೇವೇಗೌಡ ಗೂಬೆ ಕೂರಿಸುವುದನ್ನು ನಿಲ್ಲಿಸಲಿ: ಸಾ ರಾ ಮಹೇಶ್

0
Spread the love

ಮೈಸೂರು: ನನ್ನ ಮೇಲೆ ಜಿಟಿಡಿ ಗೂಬೆ ಕೂರಿಸುವುದನ್ನು ನಿಲ್ಲಿಸಲಿ ಎಂದು ಸಾ ರಾ ಮಹೇಶ್ ಹೇಳಿದ್ದಾರೆ. ಹೆಚ್ ಡಿ ದೇವೇಗೌಡರು ಪ್ರಚಾರಕ್ಕೆ ಕರೆಯಲಿಲ್ಲ ಎಂದು ಜಿ ಟಿ ದೇವೇಗೌಡ ಆರೋಪಿಸಿರುವ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು, ದೇವೇಗೌಡರು ಕರೆ ಮಾಡಿದಾಗ, ಜಿಟಿಡಿ ಅವರ ಪಿಎ ಹನುಮೇಶ್ ಕರೆ ಸ್ವೀಕರಿಸಿದರು. ಜಿ ಟಿ ದೇವೇಗೌಡರು ಬ್ಯುಸಿ ಇದ್ದಾರೆ ಆಮೇಲೆ ಕರೆ ಮಾಡ್ತಾರೆ ಎಂದು ಹೇಳಿದರು. ಆದರೆ ಅವರು ಮತ್ತೆ ಕರೆ ಮಾಡಲಿಲ್ಲ. ಈ ಬಗ್ಗೆ ಕಾಲ್ ಡೀಟೆಲ್ಸ್ ಬೇಕಾದರೂ ಕೊಡುತ್ತೇನೆ ಎಂದರು.

Advertisement

ನನಗೆ ಪಕ್ಷ ಎಲ್ಲಾ ಕೊಟ್ಟಿದೆ. ನನಗೆ ಇನ್ನೂ ಯಾವ ಆಸೆ ಇಲ್ಲ. ನಾನು ಸುಳ್ಳು ಹೇಳುತ್ತಿಲ್ಲ. ಚನ್ನಪಟ್ಟಣ ಚುನಾವಣಾ ಪ್ರಚಾರಕ್ಕೆ ಕರೆಯಲು ಎಚ್.ಡಿ. ದೇವೇಗೌಡರೆ ಜಿಟಿಡಿ ಪಿಎ ಗೆ ಕರೆ ಮಾಡಿದ್ದರು. ಇದನ್ನು ಎಚ್‌.ಡಿ. ದೇವೇಗೌಡರೆ ಹೇಳುತ್ತಾರೆ ಕೇಳಿ. ಕಾಲ್ ಡಿಟೈಲ್ಸ್ ಬೇಕಾದರೆ ಕೊಡುತ್ತೇವೆ.

ಮಾಜಿ ಪ್ರಧಾನಿಗಳ ಮೊಬೈಲ್ ನಿಂದ ಹೋಗಿರುವ ಕರೆ ಅದು. ನನಗೆ ಸುಳ್ಳು ಹೇಳುವ ಅಗತ್ಯವಿಲ್ಲ. ನನ್ನ ಮೇಲೆ ಜಿಟಿಡಿ ಗೂಬೆ ಕೂರಿಸುವುದನ್ನು ನಿಲ್ಲಿಸಲಿ. ಮುಂದೆ ಇದೇ ರೀತಿ ಅವರು ಮಾತು ಮುಂದುವರಿಸಿದರೆ ನನ್ನ ಮಾತಿನ ವರಸೆ ಬದಲಾಗುತ್ತದೆ‌. ನನ್ನಿಂದ ತೊಂದರೆ, ನಾನು ರಾಜಕೀಯ ಬಿಟ್ಟು ಬಿಡಿ ಎಂದು ಜಿಟಿಡಿ ಹೇಳಿದರೆ ನಾಳೆಯೆ ಸಾರ್ವಜನಿಕ ಜೀವನದಿಂದ ದೂರ ಇರುತ್ತೇನೆ ಎಂದು ಹೇಳಿದರು..


Spread the love

LEAVE A REPLY

Please enter your comment!
Please enter your name here