ಬೆಂಗಳೂರು:- ರಾಜಧಾನಿ ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಒಂದಾದ ಕಬ್ಬನ್ ಪಾರ್ಕ್ನಲ್ಲಿ ನಾಯಿಗಳ ಗ್ಯಾಂಗ್ ಬೀಡುಬಿಟ್ಟಿದ್ದು, ವಾಯುವಿಹಾರಿಗಳಿಗೆ ಭಯ ಹುಟ್ಟಿಸ್ತಿವೆ.
ಗೇಟ್ ಎಂಟ್ರಿಯಲ್ಲೇ ಕಾದುಕುಳಿತುಕೊಳ್ಳೋ ಶ್ವಾನಪಡೆ, ಪಾರ್ಕ್ ಒಳಗೆ ಎಂಟ್ರಿಯಾಗೋ ಜನರಿಗೆ ಬೊಗಳೋ ಮೂಲಕ ಭಯ ಹುಟ್ಟಿಸ್ತೀವೆ. ಅತ್ತ ಬೀದಿನಾಯಿಗಳ ಜೊತೆಗೆ ಸಾಕುನಾಯಿಗಳನ್ನ ವಾಕಿಂಗ್ ಗೆ ಕರೆತರೋ ಮಾಲೀಕರು, ಶ್ವಾನಗಳಿಗಾಗಿ ಪಾರ್ಕ್ ನಲ್ಲಿ ಮಾಡಿರೋ ರೂಲ್ಸ್ ಗಳನ್ನ ಉಲ್ಲಂಘಿಸ್ತಿದ್ದಾರೆ.
ಸದ್ಯ ಈಗಾಗಲೇ ಕಬ್ಬನ್ ಪಾರ್ಕ್ ನಲ್ಲಿ ಸಾಕುನಾಯಿಗಳಿಗೆ ಒಂದಷ್ಟು ರೂಲ್ಸ್ ಮಾಡಿರೋ ಪಾಲಿಕೆ, ಎಲ್ಲಾ ಪ್ರವೇಶದ್ವಾರದಲ್ಲಿ ರೂಲ್ಸ್ ಗಳನ್ನ ಭಿತ್ತರಿಸಿದೆ, ಆದ್ರೆ ಬೆಳ್ಳಂಬೆಳಗ್ಗೆ ನಾಯಿಗಳ ಜೊತೆ ಎಂಟ್ರಿಕೊಡೋ ಶ್ವಾನ ಮಾಲೀಕರು ಇಷ್ಟಬಂದಂತೆ ಶ್ವಾನಗಳನ್ನ ವಾಕ್ ಮಾಡಿಸ್ತಿರೋದು ಇತರೆ ಸಾರ್ವಜನಿಕರಿಗೆ ಅಪಾಯ ತಂದಿಡೋ ಸೂಚನೆ ನೀಡ್ತಿದೆ.
ಕಬ್ಬನ್ ಪಾರ್ಕ್ನಲ್ಲಿ ಸಾಕು ನಾಯಿಗಳಿಗೆ ಮಾಡಲಾದ ರೂಲ್ಸ್ ಗಳೇನು?
ಸಾಕುನಾಯಿಗಳಿಗೆ ಕಡ್ಡಾಯವಾಗಿ ವ್ಯಾಕ್ಸಿನೇಷನ್ ಆಗಿರಬೇಕು
ವ್ಯಾಕ್ಸಿನ್ ಆಗಿರೋದನ್ನ ಪಾರ್ಕ್ ಎಂಟ್ರಿಗೆ ಮುನ್ನ ಪರಿಶೀಲಿಸಬೇಕು
ಪಾರ್ಕ್ ಒಳಗೆ ಶ್ವಾನಗಳಿಗೆ ಆಹಾರ ನೀಡಬಾರದು.
ಚೈನ್ ಗಳ ಮೂಲಕ ನಾಯಿಗಳನ್ನ ಕಟ್ಟಿರಬೇಕು.
ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ನಾಯಿಗಳನ್ನ ವಾಕ್ ಮಾಡಿಸಬೇಕು.
ಜನರಿಗೆ ಸಾಕುನಾಯಿ ಕಚ್ಚಿದ್ರೆ ಮಾಲೀಕರೇ ಚಿಕಿತ್ಸಾವೆಚ್ಚ ಭರಿಸಬೇಕು.
ಮಲ-ಮೂತ್ರ ವಿಸರ್ಜನೆ ಮಾಡಿದ್ರೆ ಮಾಲೀಕರೇ ಸ್ವಚ್ಚಗೊಳಿಸಬೇಕು.
ಸದ್ಯ ಈ ನಿಯಮಗಳಲ್ಲಿ ಬಹುತೇಕ ರೂಲ್ಸ್ ಬ್ರೇಕ್ ಆಗ್ತಿದೆ. ಸಾಕುನಾಯಿಗಳನ್ನ ಪಾರ್ಕ್ ಗೆ ಕರೆತರೋ ಕೆಲ ಮಾಲೀಕರು ಚೈನ್ ಹಾಕದೇ ಪಾರ್ಕ್ ತುಂಬ ನಾಯಿಗಳನ್ನ ಓಡಾಡಿಸಿದ್ರೆ, ನಾಯಿಗಳಿಗೆ ವ್ಯಾಕ್ಸಿನ್ ಆಗಿದ್ಯಾ ಅನ್ನೋದನ್ನ ಪರಿಶೀಲಿಸೋದು ಬರೀ ನಾಮಫಲಕದ ರೂಲ್ಸ್ ಆಗಿ ಮಾತ್ರ ಉಳಿದಿದೆ. ಇತ್ತ ಬೀದಿನಾಯಿಗಳ ಕಾಟಕ್ಕೆ ಬ್ರೇಕ್ ಯಾವಾಗ ಅಂದ್ರೆ ಬಿಬಿಎಂಪಿಯ ಅಧಿಕಾರಿಗಳು ಕಳೆದ ಬಾರಿಗಿಂತ ಈ ಬಾರಿ ನಾಯಿಗಳು ಕಡಿಮೆಯಾಗಿದೆ ಅಂತಾ ಉತ್ತರಕೊಟ್ಟು ಜಾರಿಕೊಳ್ತಿದ್ದಾರೆ.
ರಾಜಧಾನಿಯ ಜನರಿಗೆ ಶ್ವಾನಗಳ ಕಾಟದಿಂದ ಸಂಕಷ್ಟ ಶುರುವಾಗಿದ್ದು, ನಿತ್ಯ ನಾಯಿಗಳ ಕಣ್ಣುತಪ್ಪಿಸಿ ಓಡಾಡೋ ಸ್ಥಿತಿ ಎದುರಾಗಿದೆ.