ವಿಜಯಸಾಕ್ಷಿ ಸುದ್ದಿ, ಗದಗ : 400 ವರ್ಷಗಳ ಇತಿಹಾಸ ಹೊಂದಿರುವ ಮಂತ್ರಾಲಯ ಮಠದ ಶ್ರೀಗುರು ರಾಘವೇಂದ್ರ ಸ್ವಾಮಿಗಳು ಕಿರಟಗೇರಿ ಗ್ರಾಮಕ್ಕೆ ಆಗಮಿಸಿ, ಶ್ರೀಮೂಲರಾಮದೇವರ ಪೂಜೆ ಮಾಡುತ್ತಿರುವಾಗ ವೆಂಕಣ್ಣ ಕುಲಕರ್ಣಿಯವರ ಚಿಕ್ಕ ಬಾಲಕ ಆಕಸ್ಮಿಕವಾಗಿ ಮೃತಪಟ್ಟಾಗ ಶ್ರೀಗಳು ಪುನರ್ಜನ್ಮ ನೀಡಿ ಬದುಕಿಸಿದ ಘಟನೆ ಹಾಗೂ ಕಿರಟಗೇರಿ ಗ್ರಾಮವನ್ನು ಶ್ರೀಮಠಕ್ಕೆ ಜಹಾಗೀರ (ಭಕ್ಷಿಸ್) ನೀಡಿದ ವೆಂಕಣ್ಣ ಕುಲಕರ್ಣಿಯವರ ವಾಡೆಯಲ್ಲಿ ಈಗ ವಾಸಿಸುತ್ತಿರುವ ರಾಘವೇಂದ್ರ ಶ್ರೀಗಳ ಭಕ್ತರು ಮಂತ್ರಾಲಯ ಮಠಕ್ಕೆ ತೆರಳಿ ಶ್ರೀ ಸುಭುದೇಂದ್ರ ತೀರ್ಥ ಶ್ರೀಗಳಿಗೆ ಸಮರ್ಪಣಾ ಪತ್ರ ಸಲ್ಲಿಸಿದರು.
ಸಮರ್ಪಣಾ ಪತ್ರಕ್ಕೆ ಸ್ಪಂದಿಸಿದ ಶ್ರೀಗಳು, ವಾಡೆಯಲ್ಲಿ ವಾಸಿಸುತ್ತಿರುವ ಭಕ್ತರಿಗೆ ಆಶೀರ್ವಾದ ರೂಪದಲ್ಲಿ ನಗದು ಪರಿಹಾರ ನೀಡುವುದರ ಜೊತೆಗೆ ಕಿರಟಗೇರಿ ಗ್ರಾಮವನ್ನು ಸುಕ್ಷೇತ್ರವನ್ನಾಗಿ ಮಾಡುವ ಸಂಕಲ್ಪ ಶ್ರೀಮಠದ ಇಚ್ಛೆಯಾಗಿದೆ. 400 ವರ್ಷಗಳ ನಂತರ ಈ ಕ್ಷೇತ್ರದ ಅಭಿವೃದ್ಧಿ ಮಾಡುವ ಭಾಗ್ಯ ನನ್ನದಾಗಿದೆ.
ಇದಕ್ಕೆ ಗುರು ರಾಘವೇಂದ್ರರ ಆಶೀರ್ವಾದವು ಇದೆ ಎಂದು ಆಶೀರ್ವದಿಸಿದರು.
ಕಿರಟಗೇರಿ ಗ್ರಾಮದ ವಾಡೆಯಲ್ಲಿ ವಾಸವಾಗಿದ್ದ ಶ್ರೀಮಠದ ಭಕ್ತರಾದ ಲಕ್ಷ್ಮಿಬಾಯಿ ಕುಲಕರ್ಣಿ, ಕಲ್ಮೇಶ್ವರಯ್ಯ ಹಿರೇಮಠ, ಶಿವಕುಮಾರಗೌಡ ಪಾಟೀಲ, ನಾಗರಾಜಗೌಡ ಪಾಟೀಲ, ನಿಂಗರಾಜಗೌಡ ಪಾಟೀಲ, ಶಂಕರಪ್ಪ ಪಡೇಸೂರ, ವಿರುಪಾಕ್ಷಪ್ಪ ನಾಗನೂರ, ವೀರಬಸಪ್ಪ ಕಟಕಟಿ, ಮಹೇಶ ಕೋಲಕಾದ, ಮಹೇಶಗೌಡ ಪಾಟೀಲ, ಕಲ್ಲಪ್ಪ ಹಡಪದ, ಮಲ್ಲಿಕಾರ್ಜುನ ಬೆಟದೂರ, ಚನ್ನಯ್ಯ ಹಿರೇಮಠ, ಬಸಯ್ಯ ಹಿರೇಮಠ, ಮನಸೂಕಲಾಲ ಪುಣೇಕರ, ಮುರಳಿ ಕುಲಕರ್ಣಿ, ಗುರಣ್ಣ ಹೆಬಸೂರ, ಮಂತ್ರಾಲಯದ ವಿಶೇಷ ಪ್ರತಿನಿಧಿ ಶ್ರೀನಿವಾಸ ಹುಬ್ಬಳ್ಳಿ, ಮಂತ್ರಾಲಯದ ವ್ಯವಸ್ಥಾಪಕ ಡಿ.ಎಮ್. ಆನಂದರಾವ್ ಮುಂತಾದವರು ಉಪಸ್ಥಿತರಿದ್ದರು.