ವಿಜಯಸಾಕ್ಷಿ ಸುದ್ದಿ, ಮುಳಗುಂದ: ಕಠಿಣ ಪರಿಶ್ರಮದಿಂದ ಯಶಸ್ಸು ಹೊಂದಲು ಸಾಧ್ಯ ಎಂದು ಬಿ.ಎಂ.ಎಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಧಾನ ಗುರು ಫಾತೀಮಾ ಖವಾಸ್ ಹೇಳಿದರು.
ಅವರು ಪಟ್ಟಣದ ಬಿ.ಎಂ.ಎಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಮುಳಗುಂದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಪ್ರೌಢಶಾಲಾ ವಿಭಾಗದಲ್ಲಿ ಸಾಧನೆಗೈದ ಹಿನ್ನೆಲೆ ಅಭಿನಂದಿಸಿ ಮಾತನಾಡಿ, ವಿದ್ಯಾರ್ಥಿ ಜೀವನ ಬಂಗಾರದ ಜೀವನ. ಅದನ್ನು ಈ ಪ್ರಾಥಮಿಕ ಹಾಗೂ ಪ್ರೌಢ ಹಂತದಲ್ಲಿ ಸದ್ಬಳಕೆ ಮಾಡಿಕೊಂಡಲ್ಲಿ ಮುಂದಿನ ಹಂತದ ಅಭ್ಯಾಸಕ್ಕೆ ಸಹಕಾರಿಯಾಗುತ್ತದೆ. ಕಠಿಣ ಪರಿಶ್ರಮ, ಸತತ ಪ್ರಯತ್ನ, ಛಲ, ಗುರಿಗಳನ್ನು ಮೈಗೂಡಿಸಿಕೊಂಡಲ್ಲಿ ಯಶಸ್ಸು ಕಟ್ಟಿಟ್ಟ ಬುಟ್ಟ ಎಂದು ಹೇಳಿದರು.
ಸಾಧನೆಗೈದ ವಿದ್ಯಾರ್ಥಿಗಳಾದ ಪ್ರಣತಿ ಅರಳಿ, ತಸ್ಲಿಂಬಾನು ಮುಲ್ಲಾ, ಗೀತಾ ಬಂಗಿ, ಬದ್ರುನಿಸಾ ಯಳವತ್ತಿ, ಅದಿತಿ ಕೆರಕನ್ನವರ, ಭುವನೇಶ್ವರಿ ಮಲ್ಲರೆಡ್ಡಿ, ಮಿಜಬಾ ದುರ್ಗಿಗುಡಿ, ಅನುಷಾ ಪಾಟೀಲ, ಅಮಿರಸುಹೇಲ್ ಸದರಭಾವಿ, ಶಿಕ್ಷಕಿಯರಾದ ಉಮಾ ಬ್ಯಾಳಿ, ಆಸಮಾ ಸೌದತ್ತಿ, ಶಿವಲಿಂಗಪ್ಪ ಕೊಂಡಿಕೊಪ್ಪ, ಪೂಜಾ ಮ್ಯಾಗೇರಿ, ಗೀತಾ ಕುಲಕರ್ಣಿ ಇದ್ದರು.



