ಬೆಂಗಳೂರು/ಕೇರಳ:- ಕೇರಳದ ಕೊಳದಲ್ಲಿ ಬೆಂಗಳೂರಿನ ಯುವಕನ ಶವ ಪತ್ತೆಯಾಗಿರುವ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ತಲಂಕಾರದಲ್ಲಿ ಜರುಗಿದೆ.
Advertisement
ಇಲ್ಲಿನ ಮಾಲಿಕ್ ದಿನಾರ್ ಮಸೀದಿಯಲ್ಲಿ ನಡೆದ ಸಿಯಾರತ್ ಕಾರ್ಯಕ್ರಮದಲ್ಲಿ ಮೃತ ಯುವಕ ಭಾಗಿಯಾಗಿದ್ದ. ಈ ವೇಳೆ ಕೊಳದಲ್ಲಿ ಸ್ನಾನ ಮಾಡುವಾಗ ಮೃತನ ಸ್ನೇಹಿತ ಮೊದಲು ಮುಳುಗಿದ್ದ. ಈ ವೇಳೆ ಆತನನ್ನ ರಕ್ಷಣೆ ಮಾಡಲು ಹೋಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಕೂಡಲೇ ಸ್ಥಳೀಯ ಆಸ್ಪತ್ರೆಗೆ ಮೃತದೇಹ ರವಾನಿಸಿದ ಇಲ್ಲಿನ ಪೊಲೀಸರು, ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.