ಫೆ.1ರಂದು `ಸ್ವರ ನಮನ’ ಕಾರ್ಯಕ್ರಮ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಭಾರತರತ್ನ ಪಂ. ಭೀಮಸೇನ್ ಜೋಶಿ ಪ್ರತಿಷ್ಠಾನದ ವತಿಯಿಂದ ಗದುಗಿನ ಹೆಮ್ಮೆಯ ಪುತ್ರ ಭಾರತರತ್ನ ಪಂಡಿತ್ ಭೀಮಸೇನ ಜೋಶಿಯವರ ಪುಣ್ಯಸ್ಮರಣೆಯ ನಿಮಿತ್ತ ಫೆಬ್ರವರಿ 1ರ ಸಾಯಂಕಾಲ 6 ಗಂಟೆಗೆ ಗದುಗಿನ ವಕೀಲಚಾಳದಲ್ಲಿರುವ ಮರಾಠಿ ವಾಙ್ಮಯಿ ಪ್ರೇಮಿ ಮಂಡಳದಲ್ಲಿ `ಸ್ವರ ನಮನ’ ಕಾರ್ಯಕ್ರಮ ಜರುಗಲಿದೆ.

Advertisement

ಖ್ಯಾತ ವೈದ್ಯರಾದ ಡಾ. ಧನೇಶ ದೇಸಾಯಿ ಸಮಾರಂಭವನ್ನು ಉದ್ಘಾಟಿಸುವರು. ಖ್ಯಾತ ವೈದಿಕ ವಿದ್ವಾಂಸರಾದ ವೇ.ಮೂ. ರತ್ನಾಕರಭಟ್ ಜೋಶಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಪಂ. ಭೀಮಸೇನ ಜೋಶಿ ಪ್ರತಿಷ್ಠಾನದ ಅಧ್ಯಕ್ಷರಾದ ಪಂಡಿತ್ ಅರವಿಂದ ಹುಯಿಲಗೋಳಕರ ಅಧ್ಯಕ್ಷತೆ ವಹಿಸುವರು.

ಪದ್ಮವಿಭೂಷಣ ಡಾ.ಗಂಗೂಬಾಯಿ ಹಾನಗಲ್‌ರವರ ಶಿಷ್ಯರಾದ ಕುಂದಗೋಳದ ಪಂ.ಅಶೋಕ ನಾಡಗೀರ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಸಂತವಾಣಿ ಹಾಗೂ ಭಜನ್ ಕಾರ್ಯಕ್ರಮ ನಡೆಸಿಕೊಡುವರು. ವಿಠ್ಠಲ ಕಟ್ಟೆಣ್ಣವರ ಸಂವಾದಿನಿ ಹಾಗೂ ಕೃಷ್ಣಕುಮಾರ ಕುಲಕರ್ಣಿ ತಬಲಾಸಾಥ್ ನೀಡುವರು. ಸರ್ವರಿಗೂ ಭೀಮಸೇನ್ ಜೋಶಿ ಪ್ರತಿಷ್ಠಾನದ ಸರ್ವ ಸದಸ್ಯರು ಸ್ವಾಗತ ಕೋರಿದ್ದಾರೆ.


Spread the love

LEAVE A REPLY

Please enter your comment!
Please enter your name here