ಬೆಂಗಳೂರು: ಈ ಬಾರಿ ವ್ಯವಸ್ಥಿತವಾಗಿ ಮುಸಲ್ಮಾನರು ಪ್ಲಾನ್ ಮಾಡ್ಕೊಂಡು ಗಲಾಟೆ ಮಾಡಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷವೂ ಗಣೇಶೋತ್ಸವ ಸಂದರ್ಭದಲ್ಲಿ ದರ್ಗಾ ಬಳಿ ಗಲಾಟೆ ಆಗಿತ್ತು. ಈ ಬಾರಿ ವ್ಯವಸ್ಥಿತವಾಗಿ ಮುಸಲ್ಮಾನರು ಪ್ಲಾನ್ ಮಾಡ್ಕೊಂಡು ಗಲಾಟೆ ಮಾಡಿದ್ದಾರೆ. ಇದಕ್ಕಾಗಿ ಕಲ್ಲು, ಪೆಟ್ರೋಲ್ ಬಾಂಬ್ ಇಟ್ಟುಕೊಂಡಿದ್ದರು ಎಂದು ಆರೋಪಿಸಿದ್ದಾರೆ.
Advertisement
ಸಿದ್ದರಾಮಯ್ಯ ನಡೆಸುತ್ತಿರುವುದು ತಾಲಿಬಾನ್ ಸರ್ಕಾರ. ಅವರು ಸಿಎಂ ಆಗಿದ್ದಾಗಲೇ ಹಿಂದೂ ಮುಖಂಡರ ಹತ್ಯೆಗಳಾಗಿವೆ. ಸರಣಿ ಹತ್ಯೆಗಳಾಗಿದ್ದರಿಂದಲೇ ಸಿದ್ದರಾಮಯ್ಯರನ್ನು ಮೈಸೂರಿನ ಜನ ಸೋಲಿಸಿದ್ದರು. ಮುಸ್ಲಿಮರ ಓಲೈಕೆಯೇ ತಮ್ಮಜೀವನದ ಸಿದ್ಧಾಂತ ಎನ್ನುವ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.