ವಿಜಯಸಾಕ್ಷಿ ಸುದ್ದಿ, ಶಿಹಟ್ಟಿ: ಪಟ್ಟಣದ ಫಕೀರೇಶ್ವರ ನಗರದ ಶಿಕ್ಷಕರ ಸೊಸೈಟಿಯಲ್ಲಿ ಶನಿವಾರ ಜರುಗಿದ ಸಭೆಯಲ್ಲಿ ತಾಲೂಕಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಎಂ.ಕೆ. ಲಮಾಣಿ ಆಯ್ಕೆಯಾಗಿದ್ದಾರೆ.
ಜಿಲ್ಲಾಧ್ಯಕ್ಷ ಕೆ.ಎ. ಬಳಿಗೇರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಸರ್ವಾನುಮತದ ಅಭಿಪ್ರಾಯದ ಮೇರೆಗೆ ಲಮಾಣಿ ಆಯ್ಕೆಯಾಗಿದ್ದಾರೆ. ಎಂ.ಕೆ. ಲಮಾಣಿ ಈ ಹಿಂದೆ ತಾಲೂಕಾ ಕಸಾಪ ಅಧ್ಯಕ್ಷರಾಗಿ, ಸಧ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ, ಜೊತೆಗೆ ಜಿಲ್ಲಾ ಉಪನ್ಯಾಸಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ವಿವಿಧ ಸಂಘ-ಸAಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ, ಸಿ.ಸಿ. ನೂರಶೆಟ್ಟರ, ಎಚ್.ಡಿ. ಮಾಗಡಿ, ಬಿ.ಎಸ್. ಹಿರೇಮಠ, ಎಚ್.ಎಂ. ದೇವಗಿರಿ, ಚಾಂದಸಾಬ ಮುಳಗುಂದ, ಎಸ್.ಬಿ. ಹೊಸೂರ, ಎಸ್.ಎಸ್. ಹಿರೇಮಠ, ಗಿರೀಶ ಕೋಡಬಾಳ, ಅಕ್ಬರಸಾಬ ಯಾದಗಿರಿ, ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಧಾ ಹುಚ್ಚಣ್ಣವರ, ನಂದಾ ಕಪ್ಪತ್ತನವರ, ರೇಣುಕಾ ಜಗಂಡಬಾವಿ, ರತ್ನಾ ಬದಿ, ಗೀತಾ ಹಲಸೂರ, ಬಸವರಾಜ ಕಳಸಾಪೂರ, ಸಿದ್ದು ಹಲಗಸೂರ, ಸುನೀಲ ಲಮಾಣಿ, ಮುತ್ತು ಕಪ್ಪತ್ತನವರ ಮುಂತಾದವರು ಉಪಸ್ಥಿತರಿದ್ದರು.