ಆನೇಕಲ್:- ತಮಿಳುನಾಡು ಗಡಿಯಲ್ಲಿ ಕಾಡಾನೆಗಳ ಹಾವಳಿ ಜೋರಾಗಿದೆ.
ತಮಿಳುನಾಡಿನ ಗಡಿಯಂಚಿನ ಗುಮ್ಮಳಾಪುರಂ ಸುತ್ತಮುತ್ತ ಗಜಪಡೆ ಬೀಡುಬಿಟ್ಟಿದೆ. ಮಿತಿಮೀರಿದ ಕಾಡಾನೆಗಳ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ.
ರೈತರು ಬೆಳೆದ ಬೆಳೆಗಳನ್ನು ಕಾಡಾನೆಗಳು ನಾಶಪಡಿಸುತ್ತಿವೆ. ಕಾಡಂಚಿನ ಗ್ರಾಮಗಳ ಸಮೀಪವೇ ಕಾಡಾನೆಗಳು ರೌಂಡ್ಸ್ ಹಾಕುತ್ತಿವೆ. ಸುಮಾರು 35ಕ್ಕೂ ಹೆಚ್ಚು ಕಾಡಾನೆಗಳು ಓಡಾಟ ನಡೆಸಿವೆ.
ಇನ್ನೂ ಕಾಡಾನೆಗಳ ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ.



