ಬೆಂಗಳೂರು: ಸಣ್ಣ ವ್ಯಾಪಾರಿಗಳಿಗೆ ತೆರಿಗೆ ನೋಟಿಸ್ ಬಂದಿರುವ ವಿಚಾರವಾಗಿ MLC ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ತೆರಿಗೆ ನೋಟೀಸ್ ಗಳಿಂದ ಸಣ್ಣ ವ್ಯಾಪಾರಿಗಳು ಭೀತಿಗೊಳಗಾಗಿದ್ದಾರೆ,
ಅವರಿಗಿರುವ ಹೆದರಿಕೆ, ಆತಂಕವನ್ನು ಮಧ್ಯವರ್ತಿಗಳು ಎನ್ಕ್ಯಾಶ್ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ, ಸಣ್ಣ ವ್ಯಾಪಾರಿಗಳು ತಮ್ಮ ಬಿಸಿನೆಸ್ ಮುಚ್ಚಿ ಗಂಟು ಮೂಟೆ ಕಟ್ಟಿ ತಮ್ಮ ಊರುಗಳಿಗೆ ಹೋಗುವ ಯೋಚನೆ ಮಾಡುತ್ತಿದ್ದಾರೆ ಎಂದರು.
ಕರ್ನಾಟಕ ಸರ್ಕಾರ ತನ್ನ ಖಜಾನೆಯನ್ನು ತುಂಬಿಕೊಳ್ಳಲು ಸಣ್ಣ ಪುಟ್ಟ ವ್ಯಾಪಾರಿಗಳಿಗೆ ನೋಟೀಸ್ಗಳನ್ನು ಕಳಿಸುತ್ತಿದೆ, ಚಿಕ್ಕ ವ್ಯಾಪಾರಿಗಳನ್ನು ಹೀಗೆ ಗೋಳು ಹೊಯ್ದುಕೊಳ್ಳುವ ಬದಲು ಖಜಾನೆ ಖಾಲಿಯಾಗಿದೆ ಅಂತ ಸರ್ಕಾರ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲಿ, ವ್ಯಾಪಾರಿಗಳನ್ನು ಭಯದಿಂದ ಮುಕ್ತಮಾಡುವ ಏಕೈಕ ಮಾರ್ಗವೆಂದರೆ ಅವರಿಗೆ ಜಾರಿ ಮಾಡಿರುವ ನೋಟೀಸ್ಗಳನ್ನು ವಾಪಸ್ಸು ಪಡೆಯುವುದು ಎಂದರು