ಶಿಕ್ಷಕ ಮಂಜುನಾಥ ಮಟ್ಟಿಯವರ `ಸಮಶೃತಿ ಸಿರಿಪ್ರೇಮ’ ಕವನ ಸಂಕಲನ ಬಿಡುಗಡೆ

0
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಸುಂದರ ಕುಟುಂಬದ ಬಂಡಿ ಸಾಗಲು ಪ್ರೇಮ ಅಗತ್ಯ ಎಂದು ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ್ ಹೇಳಿದರು.

Advertisement

ಅವರು ಪಟ್ಟಣದ ಅವ್ವ ಸೇವಾ ಪ್ರತಿಷ್ಠಾನ ಮುಳಗುಂದ, ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ಮುಳಗುಂದ, ಸಮರ್ಥ ಫುಡ್ಸ್ ಮುಳಗುಂದ ಇವುಗಳ ಸಂಯುಕ್ತ ಆಶ್ರಯದಲ್ಲಿ ಬಿ.ಸಿ. ಬಂಗಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಮಂಜುನಾಥ ಮಟ್ಟಿ ರಚಿಸಿದ `ಸಮಶೃತಿ ಸಿರಿಪ್ರೇಮ’ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.

ಪ್ರೀತಿ ಇದ್ದಾಗಲೇ ಬದುಕಿನ ಬಂಡಿ ಸುಗಮವಾಗಿ ಸಾಗಲು ಸಾಧ್ಯವಾಗುತ್ತದೆ. ಶಿಕ್ಷಕರಾದವರು ಕೇವಲ ಶಿಕ್ಷಣ ನೀಡದೇ ಸಾಹಿತ್ಯ ಪ್ರೇಮವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಆ ನಿಟ್ಟಿನಲ್ಲಿ ಮಂಜುನಾಥ ಮಟ್ಟಿ ಕೇವಲ ಶಿಕ್ಷಕನಾಗದೆ ಸಾಮಾಜಿಕ ಚಟುವಟಿಕೆಗಳ ಮೂಲಕ ತಾಯಿಯವರ ಹೆಸರನ್ನು ಉಳಿಸಿ ಬೆಳೆಸುವುದರ ಜೊತೆಯಲ್ಲಿ ಸಾಹಿತ್ಯ ರಂಗದಲ್ಲೂ ತೊಡಗಿಕೊಂಡು ಚಿಕ್ಕ ವಯಸ್ಸಿನಲ್ಲೇ ಚೊಚ್ಚಲ ಕವನ ಸಂಕಲನ ರಚಿಸಿರುವುದು ಸ್ತುತ್ಯಾರ್ಹ ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿ, `ಸಮಶೃತಿ ಸಿರಿಪ್ರೇಮ’ ಕವನ ಸಂಕಲನ ತಾಯಿಯ ಪ್ರೇಮ, ಸಹೋದರಿಯರ ಪ್ರೇಮ, ಸತಿ-ಪತಿಗಳ ಪ್ರೇಮದ ಕುರಿತ ಸಂಬAಧಗಳನ್ನು ಹೊತ್ತು ಸಾಗಿದೆ. ಇಂತಹ ಕೃತಿಗಳು ಮತ್ತಷ್ಟು ಹೊರಬರಲಿ ಎಂದರು.

ಅಧ್ಯಕ್ಷತೆಯನ್ನು ಬಿ.ಸಿ. ಬಂಗಾರಿ ಪ್ರಾಥಮಿಕ ಶಾಲೆಯ ಚೇರಮನ್ ಎಸ್.ಸಿ. ಬಡ್ನಿ ವಹಿಸಿದ್ದರು. ಬಾ.ಮ.ಶಿ.ಶಿ ಸಮಿತಿ ಅಧ್ಯಕ್ಷ ಎಂ.ಡಿ. ಬಟ್ಟೂರ ಕಾರ್ಯಕ್ರಮ ಉದ್ಘಾಟಿಸಿದರು. ಗದಗ ಜಿಲ್ಲಾ ಕ.ಸಾ.ಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಪುಸ್ತಕ ಲೋಕಾರ್ಪಣೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ಡಾ. ಎಸ್.ಸಿ. ಚವಡಿ, ಕೆ.ಎ. ಬಳಿಗೇರ, ಭೀಮಣ್ಣಾ ಹರಪನಹಳ್ಳಿ, ಪಿ.ಎ. ವಂಟಕರ, ಆರ್.ಆರ್. ಪಟ್ಟಣ, ನಂದೀಶ ರೋಣಿಮಠ, ಬಸವಂತಪ್ಪ ಮಟ್ಟಿ, ಮಂಜುನಾಥ ಮಟ್ಟಿ, ಉಮಾ ಮಟ್ಟಿ ಪಾಲ್ಗೊಂಡಿದ್ದರು.

 

ಶಿಕ್ಷಕ ಆರ್.ಆರ್. ಪಟ್ಟಣ ಮಾತನಾಡಿ, ಶಿಷ್ಯಂದಿರು ಗುರುಗಳನ್ನು ಮೀರಿ ಸಾಧನೆ ಮಾಡಿದಾಗ ಗುರುವಿಗೆ ಸ್ಥಾನ-ಮಾನ ಹೆಚ್ಚಾಗುತ್ತದೆ. ಆ ನಿಟ್ಟಿನಲ್ಲಿ ಮಂಜುನಾಥ ಮಟ್ಟಿ ಶಿಕ್ಷಕ ವೃತ್ತಿಯ ಜೊತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿಯಾಗಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತ, ಸಾಹಿತ್ಯ ಲೋಕಕ್ಕೆ ಅಮೂಲ್ಯವಾದ ಕವನ ಸಂಕಲನ ಹೊರ ತರುವ ಮೂಲಕ ಗುರುಗಳನ್ನು ಮೀರಿಸುವ ಕಾರ್ಯ ಮಾಡಿದ್ದಾರೆ ಎಂದರು.


Spread the love

LEAVE A REPLY

Please enter your comment!
Please enter your name here