ಬೆಂಗಳೂರು:- ತಾನೇ ಕಟ್ಟಿಸುತ್ತಿದ್ದ ಕನಸಿನ ಮನೆಯಲ್ಲಿ ಟೆಕ್ಕಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ಜರುಗಿದೆ.
ಮೃತ ಟೆಕ್ಕಿಯನ್ನು ಮುರಳಿ ಎಂದು ಗುರುತಿಸಲಾಗಿದೆ. ಉಷಾ ನಂಬಿಯಾರ್ ಎಂಬುವವರಿಂದ ಮುರಳಿ ಜಾಗ ಖರೀದಿ ಮಾಡಿ, ಮನೆ ಕಟ್ಟಿಸುತ್ತಿದ್ದರು. ನಿಯಮ ಮೀರಿ ಹೆಚ್ಚುವರಿಯಾಗಿ ಕಟ್ಟಡ ಕಟ್ಡಿರುವ ಬಗ್ಗೆ ಉಷಾ ನಂಬಿಯಾರ್ ದೂರು ನೀಡಿದ್ದರಿಂದ ಜಿಬಿಎ ನೋಟಿಸ್ ನೀಡಿತ್ತು. ಅಲ್ಲದೇ, ಜಿಬಿಎ ಅಧಿಕಾರಿಗಳ ಒಟ್ಟಿಗೆ ಶಾಮೀಲ್ ಆಗಿ 20 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದರು.
ಇಂದು ಹಣ ಕೊಡಲೇಬೇಕೆಂದು ಬೆದರಿಸಿದ್ದರಂತೆ. ಕಿರುಕುಳದಿಂದ ಬೇಸತ್ತಿದ್ದ ಮುರಳಿ ನಿರ್ಮಾಣ ಹಂತದ ಕಟ್ಟದ 2ನೇ ಫ್ಲೋರ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಉಷಾ ನಂಬಿಯಾರ್ ಸಾವಿಗೆ ಕಾರಣ ಅಂತ ಡೆತ್ನೋಟ್ ಬರೆದಿಟ್ಟಿದ್ದಾರೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಉಷಾ ನಂಬಿಯಾರ್ ಸೇರಿ ಇಬ್ಬರ ವಿರುದ್ಧ ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.


