ಮಂಗಳೂರು:– ತಾಂತ್ರಿಕ ದೋಷದ ಹಿನ್ನೆಲೆ ಮಂಗಳೂರಿನಿಂದ ದುಬೈಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನದ ಹಾರಾಟ ರದ್ದು ಮಾಡಲಾಗಿದೆ.
ಮಂಗಳೂರು ಏರ್ಪೋರ್ಟ್ನಿಂದ ಬೆಳಗ್ಗೆ 8.50ಕ್ಕೆ ವಿಮಾನ ಹಾರಾಟ ಆರಂಭಿಸಬೇಕಿತ್ತು. ಆದರೆ ತಾಂತ್ರಿಕ ದೋಷದ ಕಾರಣ ನೀಡಿ ಪ್ರಯಾಣಿಕರನ್ನು ಸಿಬ್ಬಂದಿ ಕೂರಿಸಿದ್ದರು. ಅಂತಿಮವಾಗಿ ವಿಮಾನ ಹಾರಾಟವನ್ನ ರದ್ದು ಮಾಡಲಾಗಿದೆ. ಆರಂಭದಲ್ಲಿ ಒಂದು ಗಂಟೆ ತಡವಾಗಿ ವಿಮಾನ ಹೊರಡಲಿದೆ ಎಂದು ಪ್ರಯಾಣಿಕರಿಗೆ ಸಿಬ್ಬಂದಿ ತಿಳಿಸಿದ್ದರು. ಆ ಬಳಿಕ ಇನ್ನೂ ಸ್ವಲ್ಪ ತಡವಾಗಬಹುದೆಂದು ಹೇಳಿದ್ದಲ್ಲದೆ, ಮಧ್ಯಾಹ್ನ 3.30ಕ್ಕೆ ಫ್ಲೈಟ್ ಟೇಕಾಫ್ ಆಗಲಿದೆ ಎಂದು ಮಾಹಿತಿ ಕೊಟ್ಟಿದ್ದರು.
ಆ ಸಮಯ ಕಳೆದರೂ ವಿಮಾನ ಹಾರಾಟದ ಬಗ್ಗೆ ಯಾವುದೇ ಮಾಹಿತಿ ಸಿಗದ ಕಾರಣ ಪ್ರಯಾಣಿಕರು ಮತ್ತೆ ಈ ಬಗ್ಗೆ ವಿಚಾರಿದ್ದಾರೆ. ಆಗ ಮತ್ತೆ ಬೇರೆಯದ್ದೇ ಸಮಯ ಹೇಳಿರುವ ಏರ್ಪೋರ್ಟ್ ಸಿಬ್ಬಂದಿ ಸಂಜೆ 4.30ಕ್ಕೆ ಹೊರಡೋದಾಗಿ ತಿಳಿಸಿದ್ದಾರೆ. ಅಂತಿಮವಾಗಿ ಸಂಜೆ 6 ಗಂಟೆಗೆ ಸಮಯ ನೀಡಿ ವಿಮಾನ ಹಾರಾಟ ರದ್ದು ಮಾಡಲಾಗಿದೆ. ವಿಮಾನ ಹಾರಾಟ ರದ್ದಾದ ಪರಿಣಾಮ ಹೆಚ್ಚುವರಿ ಹಣ ನೀಡಿ ಹಗಲಿನ ಪ್ರಯಾಣಕ್ಕೆ ಬುಕ್ ಮಾಡಿದ್ದ ಪ್ರಯಾಣಿಕರು ನಿರಾಸೆಗೊಂಡಿದ್ದಾರೆ. ರಾತ್ರಿ ವೇಳೆ ಪ್ರಯಾಣ ಬೇಡ ಎಂದು ಹೆಚ್ಚುವರಿ ಮೊತ್ತ ಭರಿಸಿದ್ದೇವೆ. ಈಗ ಬಹರೈನ್ನಿಂದ ಬರುವ ಫ್ಲೈಟ್ನಲ್ಲಿ ಕಳಿಸ್ತೇವೆ ಎಂದು ಇವರು ಸಬೂಬು ಹೇಳುತ್ತಿದ್ದು, ಹೆಚ್ಚು ಮೊತ್ತ ಭರಿಸಿಯೂ ಮತ್ತೆ ರಾತ್ರಿ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದು ಅವಲತ್ತುತೋಡಿಕೊಂಡಿದ್ದಾರೆ.



