ಆಂದ್ರ ಪ್ರದೇಶ: ಜನಪ್ರಿಯ ನಟ ಪೊಸಾನಿ ಕೃಷ್ಣ ಮುರಳಿ ಅವರನ್ನು ಬಂಧಿಸಲಾಗಿದೆ. ಪೊಸಾನಿ ಕೃಷ್ಣ ಮುರಳಿ ಅವರನ್ನು ರಾಯಚೋಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಮುದಾಯವೊಂದರ ವಿರುದ್ಧ ನಟ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯು ಎರಡು ಗುಂಪುಗಳ ನಡುವೆ ವೈಷಮ್ಯಕ್ಕೂ ಕಾರಣವಾಯಿತು. ಈ ಹಿನ್ನೆಲೆ ಪೋಸಾನಿ ಕೃಷ್ಣ ವಿರುದ್ಧ ಕೇಸ್ ದಾಖಲಿಸಲಾಗಿದ್ದು,
ಹೈದರಾಬಾದ್ನಲ್ಲಿರುವ ಪೊಸಾನಿ ಕೃಷ್ಣ ಮುರಳಿ ನಿವಾಸಕ್ಕೆ ತೆರಳಿದ ಅನ್ನಮಯ್ಯ ಜಿಲ್ಲೆಯ ರಾಯಚೋಟಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಪೊಸಾನಿಯನ್ನು ಹೈದರಾಬಾದ್ನಿಂದ ಆಂಧ್ರಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತಿದೆ. ಪೊಸಾನಿಯನ್ನು ಅನಂತಪುರಕ್ಕೆ ಸ್ಥಳಾಂತರಿಸಲಾಗುತ್ತಿದೆ..
ಪೊಲೀಸರು ಪೊಸಾನಿ ವಿರುದ್ಧ ಸೆಕ್ಷನ್ 196, 353(2), 111 ರೆಡ್ವಿತ್ 3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬುಧವಾರ ರಾತ್ರಿ ಅವರನ್ನು ವಶಕ್ಕೆ ಪಡೆದರು. ಜಾತಿಯ ಹೆಸರಿನಲ್ಲಿ ಜನರನ್ನು ಅವಮಾನಿಸಿ ಜನರಲ್ಲಿ ವರ್ಗ ಭೇದ ಸೃಷ್ಟಿಸಿದ್ದಕ್ಕಾಗಿ ಪೊಸಾನಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.