ಪುಂಡರ ಬೈಕ್ ವೀಲಿಂಗ್ʼಗೆ ದೇವಾಲಯದ ಅರ್ಚಕ ಸಾವು!

0
Spread the love

ಕೋಲಾರ: ಸಂಚಾರ ದಟ್ಟಣೆಯೇ ಒಂದು ದೊಡ್ಡ ಸಮಸ್ಯೆಯಾಗಿದ್ದು, ಇದರ ನಿಯಂತ್ರಣಕ್ಕೆ ಹರಸಾಹಸ ಪಡಬೇಕಿರುವ ಸಂದರ್ಭದಲ್ಲಿ ಬೈಕ್ ವೀಲಿಂಗ್‌ ಮತ್ತೊಂದು ಸಮಸ್ಯೆಯಾಗಿದ್ದು, ಜನರ ಜೀವಕ್ಕೂ ಸಂಚಕಾರವನ್ನು ತಂದೊಡ್ಡುವಂತಿದೆ. ಇದು ಕೇವಲ ಬೆಂಗಳೂರಿನ ಸಮಸ್ಯೆ ಮಾತ್ರವಲ್ಲದೆ, ರಾಜ್ಯದ ಹಲವು ಕಡೆ ನಡೆಯುತ್ತಿದೆ. ಇದರ ನಡುವೆ ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದ ಸಂತೆಗೇಟ್ ನಲ್ಲಿ ಪುಂಡರ ಬೈಕ್ ವೀಲಿಂಗ್ ಗೆ ದೇವಾಲಯದ ಅರ್ಚಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಗಣೇಶ ದೇವಸ್ಥಾನದ ಅರ್ಚಕ ಗೋಪಾಲ್ ರಾವ್ (೪೫) ಮೃತ ದುರ್ಧೈವಿಯಾಗಿದ್ದು,

Advertisement

ಗಾಂಧಿನಗರ ಗಣೇಶ ದೇವಾಲಯದ ಪೂಜೆ ಮುಗಿಸಿ ದೇವಾಲಯಕ್ಕೆ ಬೀಗ ಹಾಕಿ ಮನೆಗೆ ವಾಪಸ್ ಆಗುವ ವೇಳೆ ಬೈಕ್ ವೀಲಿಂಗ್ ಮಾಡಿಕೊಂಡು ಬಂದ ಪುಂಡರ ಗ್ಯಾಂಗ್ ನಿಂದ ಡಿಕ್ಕಿ ಹೊಡೆಯಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಗೋಪಾಲರಾವ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇನ್ನೂ ರಾಜ್ಯದ ಪೊಲೀಸರು ಕಾನೂನು ಕ್ರಮಗಳನ್ನು ಕೈಗೊಂಡಿದ್ದರೂ ಪ್ರಮುಖ ರಸ್ತೆಗಳ ಅಲ್ಲಲ್ಲಿ ವೀಲಿಂಗ್‌ ಪ್ರಕರಣಗಳು ಕಂಡುಬರುತ್ತಲೇ ಇವೆ.

 


Spread the love

LEAVE A REPLY

Please enter your comment!
Please enter your name here