ಕೊಲ್ಕತ್ತಾದಲ್ಲಿ ಭೀಕರ ಹತ್ಯೆ: ಮರ್ಮಾಂಗ ಕತ್ತರಿಸಿ ಶಿಕ್ಷಕನ ಬಾಯಲ್ಲಿ ತುರುಕಿದ ಹಂತಕರು!

0
Spread the love

ಕೊಲ್ಕತ್ತಾ:- ಕೊಲ್ಕತ್ತಾದ ಅಲಿಪುರ್ದಾರ್‌ನ ಜಯಗಾಂವ್‌ನಲ್ಲಿ ಶಿಕ್ಷಕನೋರ್ವನ ಭೀಕರ ಹತ್ಯೆ ನಡೆದಿದ್ದು, ಜನನಾಂಗಗಳನ್ನು ಕತ್ತರಿಸಿದ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಮೃತ ಶಿಕ್ಷಕನ ಹೆಸರು ಶಾಂತಬೀರ್ ಲಾಮಾ ಎಂದು ತಿಳಿದು ಬಂದಿದೆ.

Advertisement

ಮಾಹಿತಿ ಪ್ರಕಾರ, ಶಿಕ್ಷಕನ ಗುಪ್ತಾಂಗವನ್ನು ಕತ್ತರಿಸಿ ಬಾಯಿಗೆ ತುರುಕಲಾಗಿದೆ. ಶಾಂತಬೀರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರ ವಿರುದ್ಧ ಅವರ ಕುಟುಂಬವು ಕೊಲೆ ಪ್ರಕರಣವನ್ನು ದಾಖಲಿಸಿದೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅಲಿಪುರ್ದೂರ್ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.

ಶನಿವಾರ ಬೆಳಗ್ಗೆ ಶಾಲೆಯ ಮುಂಭಾಗದಲ್ಲಿ ಶಾಲಾ ಶಿಕ್ಷಕನ ರಕ್ತಸಿಕ್ತ ಶವ ಪತ್ತೆಯಾಗಿದೆ. ಅವರ ಸಾವಿಗೆ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ.

ಅಲಿಪುರ್ದೂರ್ ಜಿಲ್ಲೆಯ ಜೈಗಾಂವ್ ಪೊಲೀಸ್ ಠಾಣೆಯು ಘಟನೆಯ ತನಿಖೆಯನ್ನು ಪ್ರಾರಂಭಿಸಿದೆ.


Spread the love

LEAVE A REPLY

Please enter your comment!
Please enter your name here