ಭಯೋತ್ಪಾದಕರಿಗೆ ಜಾತಿ-ಧರ್ಮವೆಂಬುದಿಲ್ಲ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಜಮ್ಮು- ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿರುವ ದಾಳಿಯನ್ನು ಖಂಡಿಸಿ ಶಿರಹಟ್ಟಿಯ ಕರ್ನಾಟಕ ಮುಸ್ಲಿಂ ಯುನಿಟಿ ಕೇಂದ್ರ ಸರ್ಕಾರಕ್ಕೆ ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಿತು.

Advertisement

`ಮಾನವೀಯತೆಯೇ ಮೊದಲ ಧರ್ಮ’ವಾಗಿದ್ದು, ಭಯೋತ್ಪಾದಕರಿಗೆ ಜಾತಿ-ಧರ್ಮವೆಂಬುದಿಲ್ಲ. ಇವರಿಗೆ ಭಯೋತ್ಪಾದನೆಯೇ ಜಾತಿ ಮತ್ತು ಧರ್ಮವಾಗಿದೆ. ಸದರಿ ಅಮಾಯಕರ ಮೇಲೆ ದಾಳಿ ನಡೆಸಿದವರು ಯಾವುದೇ ಧರ್ಮಕ್ಕೆ ಸೇರಿದವರಾಗಿದ್ದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕು. ಶಾಂತಿ ಪ್ರಿಯ ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಇಂತಹ ಹೇಯ ಕೃತ್ಯಗಳ ವಿರುದ್ಧ ಕೇಂದ್ರ ಸರಕಾರ ಕಠಿಣವಾದ ಕ್ರಮಗಳನ್ನು ಕೈಗೊಳ್ಳಬೇಕು. ಈ ಘಟನೆಯಲ್ಲಿ ಭಾಗಿಯಾದ ಭಯೋತ್ಪದಕರನ್ನು ಆದಷ್ಟು ಬೇಗ ಪತ್ತೆಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ಈ ಘಟನೆಯಲ್ಲಿ ಮೃತಪಟ್ಟ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಶಿರಹಟ್ಟಿ ಕರ್ನಾಟಕ ಮುಸ್ಲಿಂ ಯುನಿಟಿ ಪದಾಧಿಕಾರಿಗಳದ ರಿಯಾಜ್ ಲಕ್ಷ್ಮೇಶ್ವರ, ಇಬ್ರಾಹಿಂ ಮನಿಯಾರ, ಹಾಜಿ ಖುರೇಶ್ ಮನಿಯಾರ, ಹಾಜಿ ಸಾದಿಕ್ ಮುಳಗುಂದ, ಮೌಲಾ ಕಾರಬೂದಿ, ಸುಭಾನಿ ಬರದೂರ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here