ವಿಜಯಸಾಕ್ಷಿ ಸುದ್ದಿ, ಗದಗ: ನಿರಂತರ ಶ್ರಮ, ತಂದೆ-ತಾಯಿ ಮತ್ತು ಗುರುಗಳ ಪ್ರೋತ್ಸಾಹದಿಂದ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ಎಎಸ್ಎಸ್ ಪ.ಪೂ ಕಾಲೇಜಿನ ವಿದ್ಯಾರ್ಥಿ ವಿಜಯರಾಜ ಶಿದ್ಲಿಂಗ ಹೇಳಿದರು.
ಅವರು ಗಂಗಾಪೂರ ಪೇಟೆಯಲ್ಲಿ ಶ್ರೀ ದುರ್ಗಾದೇವಿ ಶಿಕ್ಷಣ ಸಮಿತಿ ಹಾಗೂ ಗುರು-ಹಿರಿಯರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ವಿಜಯರಾಜ ತಂದೆ ನಾಗೇಂದ್ರಸಾ ಶಿದ್ಲಿಂಗ ಮಾತನಾಡಿ, ಮಗನ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿರುವದರಿಂದ ಸಾಧನೆಯ ಬಗ್ಗೆ ಹೆಮ್ಮೆ ಇದೆ. ಮುಂದಿನ ಅವನ ಭವಿಷ್ಯಕ್ಕೆ ನಾವೆಲ್ಲರೂ ಸಹಕಾರ ನೀಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಓಣಿಯ ಹಿರಿಯರಾದ ಪರಶುರಾಮ ಹಬೀಬ, ಮೋಹನ ಇಮರಾಪೂರ, ಮಂಜುನಾಥ ಕೆಂದೂಳಿ, ಲಕ್ಷ್ಮಣ ಬಾಂಡಗೆ, ಮುತ್ತು ಜಡಿ, ವೆಂಕಟೇಶ ಇಮರಾಪೂರ, ಚೆನ್ನಪ್ಪ ಕೊಪ್ಪದ ಹಾಗೂ ಕುಟುಂಬದವರಾದ ದತ್ತುಸಾ ಶಿದ್ಲಿಂಗ ದಂಪತಿಗಳು ಉಪಸ್ಥಿತರಿದ್ದರು.