ಕುಂದಗೋಳ :ಪ್ರಯಾಣಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಹಣ, ಬೆಳ್ಳಿ, ಬಟ್ಟೆ ತುಂಬಿದ್ದ ಬ್ಯಾಗ್ ಬಿಟ್ಟು ಇಳಿದಿದ್ದ ಪ್ರಯಾಣಿಕರೋರ್ವರಿಗೆ ಮರೆತುಹೋಗಿದ್ದ ಬ್ಯಾಗ್ಅನ್ನು ತಲುಪಿಸುವ ಮೂಲಕ ಬಸ್ ಚಾಲಕ ಮತ್ತು ನಿರ್ವಾಹಕ ಪ್ರಾಮಾಣಿಕತೆ ಮೆರೆದಿರುವ ಘಟನೆ ನಗರದಲ್ಲಿ ನಡೆದಿದೆ.
ಎಸ್, ನವಲಗುಂದ ತಾಲೂಕಿನ ಹಣಸಿ ಗ್ರಾಮದ ಕಮಲಾ ಎಂಬ ಮಹಿಳೆ, ಕುಂದಗೋಳ ತಾಲೂಕಿನ ದೇವನೂರು ಗ್ರಾಮಕ್ಕೆ ತೆರಳಲು ಹುಬ್ಬಳ್ಳಿಯಿಂದ ಕುಂದಗೋಳ ಮಾರ್ಗವಾಗಿ ಹೊರಡುವ ಯರಗುಪ್ಪಿ ಬಸ್’ನಲ್ಲಿ ಪ್ರಯಾಣ ಬೆಳೆಸಿದ್ದರು.
ಪ್ರಯಾಣ ಮದ್ಯೆ ಕುಂದಗೋಳ ದಲ್ಲಿ ಬಸ್’ನಿಂದ ಇಳಿದಾಗ ಬ್ಯಾಗ್ ಮರೆತಿದ್ದರು. ಈ ವೇಳೆ ಪ್ರಯಾಣಿಕರು ಬಿಟ್ಟು ಹೋದ ಬ್ಯಾಗನ್ನು ತೆಗೆದು ಪುನಃ 6 ಗಂಟೆಗೆ ಅದೇ ಕುಂದಗೋಳ ಬಸ್ ನಿಲ್ದಾಣದಲ್ಲಿ ಮಹಿಳೆಗೆ ನಿರ್ವಾಹಕ ಶರೀಪಸಾಬ್ ನದಾಫ್, ಚಾಲಕ ಬಸವಂತಪ್ಪ ಮಂಟೂರು, ನೀಡಿ ಜನರ ಪ್ರಸಂಶೆಗೆ ಪಾತ್ರರಾದರು.
ಇನ್ನೂ ತನ್ನ ಬ್ಯಾಗ್ ಬೆಳ್ಳಿ ಆಭರಣ, ನಗದು ಹಣ ಕಳೆದುಕೊಂಡ ಪೇಚಿಗೆ ಸಿಲುಕಿ ಕಣ್ಣೀರು ಹಾಕಿದ್ದ ಮಹಿಳೆ, ಬಳಿಕ ಬ್ಯಾಗ್ ಸಿಕ್ಕ ಬಳಿಕ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ.
ಒಟ್ಟಾರೆ ಪ್ರಾಮಾಣಿಕತೆಯ ಸಾರಿಗೆ ಸೇವೆ ನೀಡಿ ಪ್ರಯಾಣಿಕರ ಮನಗೆದ್ದ ಚಾಲಕ ನಿರ್ವಾಹಕರಿಗೆ ಒಂದು ಸಲಾಂ ಹೇಳಲೇಬೇಕು.