ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ವೀರೇಶ್ವರ ಪುಣ್ಯಾಶ್ರಮ ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಿದೆ. ಅಂಧ-ಅನಾಥ ಮಕ್ಕಳಿಗೆ ಅನ್ನ-ಆಶ್ರಯವನ್ನು ನೀಡಿ ಸ್ವಾವಲಂಬಿ ಜೀವನವನ್ನು ನಡೆಸುವ ದಿಸೆಯಲ್ಲಿ ಆಸರೆಯಾಗಿದೆ. ಪಂಚಾಕ್ಷರಿ ಗವಾಯಿಗಳು ಹಾಗೂ ಪುಟ್ಟರಾಜ ಗವಾಯಿಗಳು ತಮ್ಮ ಅಂತಃಶಕ್ತಿಯಿಂದ ಈ ಕ್ಷೇತ್ರವನ್ನು ಬೆಳಗಿದ್ದಾರೆ ಎಂದು ಕಲಾವಿಕಾಸ ಪರಿಷತ್ತಿನ ಅಧ್ಯಕ್ಷರಾದ ಚನ್ನವೀರಸ್ವಾಮಿ ಹಿರೇಮಠ (ಕಡಣಿ) ತಿಳಿಸಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗದುಗಿನ ಪಿ.ಪಿ.ಜಿ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಜರುಗಿದ ಚನ್ನವೀರಶಾಸ್ತ್ರೀ ಹಿಡ್ಕಿಮಠ ದತ್ತಿ ಉಪನ್ಯಾಸದಲ್ಲಿ ಮಾತನಾಡಿದರು.
ಬಸರೀಗಿಡದ ವೀರಪ್ಪನವರು ಸ್ಥಳದಾನದ ಮೂಲಕ ವೀರೇಶ್ವರ ಪುಣ್ಯಾಶ್ರಮ ಸ್ಥಾಪನೆಗೆ ಕಾರಣರಾದರು. ಅದರ ಪರಿಣಾಮದಿಂದ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುವಂತಾಯಿತು ಎಂದು ತಿಳಿಸಿದರು.
ಚನ್ನವೀರ ಶಾಸ್ತ್ರಿಗಳ ಸಂಸ್ಮರಣೆ ಮಾಡಿದ ಡಾ. ದತ್ತಪ್ರಸನ್ನ ಪಾಟೀಲ ಮಾತನಾಡಿದರು. ಭಕ್ತರು ನೀಡುವ ಕಾಣಿಕೆಗಳನ್ನು ವ್ಯವಸ್ಥಿತವಾಗಿ ಸಂಘಟಿಸಿ ಆಶ್ರಮದ ಬೆಳವಣಿಗೆಯ ಹಿನ್ನೆಲೆಯಲ್ಲಿ ಚನ್ನವೀರ ಶಾಸ್ತ್ರಿಗಳ ಕೊಡುಗೆ ಅನುಮಪವಾದುದು ಎಂದು ತಿಳಿಸಿದರು.
ವೇದಿಕೆ ಮೇಲೆ ಪಂಚಾಕ್ಷರಯ್ಯ ಹಿಡ್ಕಿಮಠ, ಡಾ. ಅನಂತ ಶಿವಪೂರ, ಕಿಶೋರಬಾಬು ನಾಗರಕಟ್ಟಿ, ಆರ್.ಡಿ. ಕಪ್ಪಲಿ, ಡಿ.ಎಸ್. ಬಾಪುರಿ ಉಪಸ್ಥಿತರಿದ್ದರು. ಚನ್ನವೀರೇಶ ಕವಲೂರ ಪ್ರಾರ್ಥಿಸಿದರು. ಪ್ರೊ. ಡಿ.ಎಸ್. ಗಾಳಿ ಸ್ವಾಗತಿಸಿದರು. ರಾಘವೇಂದ್ರ ತೆಗ್ಗಿನಮನಿ ನಿರೂಪಿಸಿದರು. ಡಿ.ಎಸ್. ಬಾಪುರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಎನ್.ಎನ್. ಕಿಂದ್ರಿ, ಡಿ.ಎಸ್. ಶಿಗ್ಲಿ, ಜೆ.ಎಸ್. ಇಟಗಿ, ಡಾ. ಆರ್.ಎಫ್. ಹೂಗಾರ, ಡಾ. ಎ.ಎಫ್. ಜಂಬಣ್ಣವರ, ಡಾ. ಶೋಭಾ ಎಸ್.ಜೆ., ಎಂ.ಎಫ್. ಹೊಂಬಳ, ಕೆ.ಎಚ್. ಹೆಬಸೂರ, ಗುರು ಹೂಗಾರ, ಡಾ. ಪಿ.ಎಚ್. ಜೋಗಿ, ಎಸ್.ಎಂ. ಹೊಸಮನಿ, ಪಿ.ಆರ್. ವಸ್ತçದ, ಆರ್.ಕೆ. ಗುರುಮಠ, ಪಿ.ಆರ್. ದೊಡ್ಡಮನಿ, ಪಿ.ಬಿ. ಮಾಳೇಕೊಪ್ಪಮಠ ಹಾಗೂ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಸಂಗೀತ, ಸಾಹಿತ್ಯ, ರಂಗಭೂಮಿಗೆ ವಿಶೇಷ ಚೈತನ್ಯವನ್ನು ನೀಡಿದ ವೀರೇಶ್ವರ ಪುಣ್ಯಾಶ್ರಮ ವಿಕಲಚೇತನರ ಆಶಾಕಿರಣವಾಗಿದೆ. ಮನುಷ್ಯನಿಗಿರುವ ಕೊರತೆಗಳನ್ನು ಯಶಸ್ಸಿನ ಮೆಟ್ಟಿಲುಗಳನ್ನಾಗಿಸಿಕೊಂಡು ಜೀವನದಲ್ಲಿ ಹೇಗೆ ಸಫಲತೆಯನ್ನು ಸಾಧಿಸುಬೇಕೆಂಬುದನ್ನು ಪ್ರಾಯೋಗಿಕವಾಗಿ ತೋರಿಸಿದೆ. ಈ ದಿಸೆಯಲ್ಲಿ ಪಂಚಾಕ್ಷರಿ ಹಾಗೂ ಪುಟ್ಟರಾಜ ಗವಾಯಿಗಳ ಕೊಡುಗೆ ಅಪಾರವಾದುದು ಎಂದು ತಿಳಿಸಿದರು.