ಚಾಮರಾಜನಗರ:- ಜಮೀನುಗಳ ಬೋರ್ವೆಲ್ಗೆ ಅಳವಡಿಸಿದ್ದ ಕೇಬಲ್ ಗಳನ್ನು ಖದೀಮರು ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ನೇನೆಕಟ್ಟೆ ಗ್ರಾಮದಲ್ಲಿ ಜರುಗಿದೆ.
Advertisement
ಒಂದೆಡೆ ಕಾಡು ಪ್ರಾಣಿಗಳು, ಮತ್ತೊಂದೆಡೆ ಕಳ್ಳರ ಕಾಟ. ರೈತರಿಗೆ ಈಗ ಕೇಬಲ್ ಕಳ್ಳತನದ ತಲೆ ನೋವು ಸೃಷ್ಟಿಯಾಗಿದೆ. ಕೆಲ ದಿನಗಳ ಹಿಂದೆ ಕಮರಹಳ್ಳಿ, ಬಾಚಹಳ್ಳಿ, ಹೊಸಪುರದಲ್ಲೂ ಕೂಡ ಕೇಬಲ್ ಕಳುವಾಗಿತ್ತು.
ಹೀಗಾಗಿ ಕೇಬಲ್ ಕಳುವನ್ನು ತಡೆಯಲು ರೈತರು ಒತ್ತಾಯಿಸಿದ್ದಾರೆ. ಗುಂಡ್ಲುಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.