ವೈದ್ಯರ ಕರ್ತವ್ಯನಿಷ್ಠೆ ಶ್ರೇಷ್ಠವಾಗಿದೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಸ್ತುತ ಸಮಾಜದಲ್ಲಿ ವೈದ್ಯಕೀಯ ಸೇವೆ ಬಹಳ ಮುಖ್ಯ. ವೈದ್ಯಕೀಯ ಸೇವೆ ನೀಡುವಲ್ಲಿ ವೈದ್ಯರು ಪ್ರಮುಖ ಪಾತ್ರ ವಹಿಸುತ್ತಾರೆ. ಒಂದು ಪ್ರಾಣ ಉಳಿಸುವಲ್ಲಿ ವೈದ್ಯರು ತೋರುವ ಕರ್ತವ್ಯನಿಷ್ಠೆ ಬಹಳ ಮುಖ್ಯವಾದದ್ದು ಎಂದು ಮಹಿಳಾ ವೈದ್ಯಕೀಯ ಸಂಘದ ಅಧ್ಯಕ್ಷರಾದ ಸೋನಿಯಾ ಕರೂರ ಹೇಳಿದರು.

Advertisement

ಅವರು ನವಜ್ಯೋತಿ ವ್ಯಸನಮುಕ್ತಿ ಕೇಂದ್ರದಲ್ಲಿ ನಡೆದ ವೈದ್ಯರ ದಿನಾಚರಣೆಯಲ್ಲಿ ಮಾತನಾಡಿದರು.

ಸಮಯದ ಹಂಗಿಲ್ಲದೆ ರೋಗಿಯೊಬ್ಬನ ಆರೈಕೆ ಮಾಡುವ ವೈದ್ಯರ ಸೇವೆ, ತ್ಯಾಗ, ಸಮಯ ಪ್ರಜ್ಞೆ ಸಮಾಜಕ್ಕೆ ಬಹಳ ಅವಶ್ಯವಾಗಿದೆ. ನಾನೂ ಕೂಡ ವೈದ್ಯಕೀಯ ವೃತ್ತಿಯಲ್ಲಿದ್ದು, ಈ ವೃತ್ತಿಯ ಎಲ್ಲಾ ಮಜಲುಗಳನ್ನು ಕಂಡು ಈ ವೃತ್ತಿಯಲ್ಲಿರುವವರ ಬಗ್ಗೆ ನನಗೆ ಅಪಾರ ಗೌರವ ಮತ್ತು ಹೆಮ್ಮೆ ಇದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಸವರಾಜ ಬೇವಿನಮರದ ಮಾತನಾಡಿ, ಎಷ್ಟೋ ಜನರು ಇವತ್ತು ವೈದರಿಂದ ಮರುಜೀವ ಪಡೆದು ಬದುಕಿದ್ದರೆ. ಅಂತಹ ವೈದರ ಸೇವೆಯನ್ನು ಸಮಾಜ ನೆನಪಿಡಬೇಕು ಎಂದು ಹೇಳಿದರು.

ಭಾಗ್ಯಲಕ್ಷ್ಮೀ ನವಲಗುಂದ್ ಸ್ವಾಗತಿಸಿದರು. ಶಿವಾನಂದ ಹಡಗಲಿ ನಿರೂಪಿಸಿದರು. ಶ್ವೇತಾ ಕೋಲೇಕರ್ ವಂದಿಸಿದರು. ಸಂಸ್ಥೆಯ ಸಿಬ್ಬಂದಿ ಹಾಗೂ ಚಿಕಿತ್ಸಾರ್ಥಿಗಳು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here