ವಿಜಯಸಾಕ್ಷಿ ಸುದ್ದಿ, ಗದಗ: ಜಾತ್ರೆಯ ನೆಪದಲ್ಲಿ ತಿಂಗಳಾನುಗಟ್ಟಲೆ ಸಾರ್ವಜನಿಕ ರಸ್ತೆಯಲ್ಲಿ ಅನ್ಯ ಧರ್ಮದ, ಅನ್ಯ ರಾಜ್ಯದ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತ ಸಾರ್ವಜನಿಕ ಸಂಚಾರ ವ್ಯವಸ್ಥೆಗೆ ಅಡ್ಡಿಪಡಿಸುವುದರ ಜೊತೆಗೆ ಸ್ಥಳೀಯ ವ್ಯಾಪಾರಿಗಳ ಹೊಟ್ಟೆಯ ಮೇಲೆ ಕಲ್ಲು ಹಾಕುತ್ತಿರುವುದನ್ನು ವಿರೋಧಿಸಿ ಹಾಗೂ ಈ ಕೂಡಲೇ ತಾತ್ಕಾಲಿಕವಾಗಿ ಹಾಕಿರುವ ಅಂಗಡಿಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಶ್ರೀರಾಮ ಸೇನಾ, ಅಟೋ ಸೇನಾ ಹಾಗೂ ದಲಿತ ಮಿತ್ರ ಮೇಳ ಇವುಗಳ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಶನಿವಾರ ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಿದರು.
ಶ್ರೀರಾಮ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ ಮಾತನಾಡಿ, ಸ್ಥಳೀಯ ವ್ಯಾಪಾರಸ್ಥರು ತೆರಿಗೆ, ಲೈಸನ್ಸ್ ಗಳನ್ನು ಪಡೆದು ವ್ಯಾಪಾರ ಮಾಡುತ್ತಿರುವ ಹಣಕ್ಕಿಂತ ತೋಂಟದಾರ್ಯ ಜಾತ್ರೆಯಿಂದ ಚಿನ್ನದ ಮೊಟ್ಟೆ ಇಡುವ ಕೋಳಿ ದೊರೆತಂತಾಗಿದೆ. ಹಾಗಾಗಿ ಜನರ ಹಾಗೂ ಸ್ಥಳೀಯ ವ್ಯಾಪಾರಸ್ಥರ ಸಮಸ್ಯೆಗೆ ನಗರಸಭೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಶಾರೀರಿಕ ಪ್ರಮುಖರಾದ ಮಹೇಶ ರೋಖಡೆ, ಜಿಲ್ಲಾಧ್ಯಕ್ಷ ಸೋಮು ಗುಡಿ, ದಲಿತ ಮಿತ್ರ ಮೇಳ ಅಧ್ಯಕ್ಷ ಕುಮಾರ ನಡಗೇರಿ, ಉಪಾಧ್ಯಕ್ಷ ವೆಂಕಟೇಶ ದೊಡ್ಡಮನಿ, ಸತೀಶ ಕುಂಬಾರ, ಕಿರಣ ಹಿರೇಮಠ, ಹುಲಗಪ್ಪ ವಾಲ್ಮೀಕಿ, ಶ್ರೀರಾಮ ಸೇನಾ ಗದಗ ತಾಲೂಕಾಧ್ಯಕ್ಷ ಭರತ ಲದ್ದಿ, ಮುಂಡರಗಿ ತಾಲೂಕಾಧ್ಯಕ್ಷ ಸುದೀಪ ಗಡಾದ, ಶಿವಯೋಗಿ ಹಿರೇಮಠ, ರವಿ ಜಾಲಗಾರ, ಶರಣಪ್ಪ ಲಕ್ಕುಂಡಿ, ಈರಪ್ಪ ಹೆಬಸೂರ, ಅಭಿಲಾಷ ಗುಜಮಾಗಡಿ, ಲಕ್ಷ್ಮಣ ಗೌಡರ, ಪರಶುರಾಮ ಆಡಿನ, ಮಹಾಂತೇಶ ಹೊನ್ನಪ್ಪನವರ, ಸದಾನಂದಸಿAಗ್ ಗುರ್ಲಹೊಸುರ, ಅಟೋ ಸೇನಾ ನಗರಾಧ್ಯಕ್ಷ ಮೌನೇಶ ದಾಸರ, ಮಂಜು ಗುಡಿಮನಿ, ಸಚಿನ ಮುಸಂಡಿ, ಶಿವು ದಂಡಿನ, ಪ್ರವೀಣ ಕೊಳ್ಳಿ, ಶಿವಕುಮಾರ ಹಿರೇಮಠ, ಬಸವರಾಜ ಹುಲಕೋಟಿ, ಈರಣ್ಣ ಗಾಣೀಗೇರ, ಶಿವನಂದಿ ಮುಂತಾದವರು ಧರಣಿಗೆ ಸಾಥ್ ನೀಡಿದರು.