HomeGadag Newsಸಂಸ್ಥೆಗಳ ಭವಿಷ್ಯ ಆಡಳಿತ ಮಂಡಳಿಯ ಮೇಲಿದೆ: ಹೆಚ್. ಮಂಜಪ್ಪ

ಸಂಸ್ಥೆಗಳ ಭವಿಷ್ಯ ಆಡಳಿತ ಮಂಡಳಿಯ ಮೇಲಿದೆ: ಹೆಚ್. ಮಂಜಪ್ಪ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದ: ಗಸಹಕಾರ ಸಂಘ-ಸಂಸ್ಥೆಗಳ ಭವಿಷ್ಯ ಆ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಅಧಿಕಾರ ವರ್ಗದ ಮೇಲೆ ನಿಂತಿರುತ್ತದೆ. ಸಹಕಾರ ಸಂಸ್ಥೆಗಳ ವ್ಯವಸ್ಥೆಯಲ್ಲಿ ಆಡಳಿತ ಮಂಡಳಿ ಸಂಘದ ಭವಿಷ್ಯವನ್ನು ರೂಪಿಸುವಲ್ಲಿ ವಾಸ್ತವಿಕವಾಗಿ ತೀರ್ಮಾನಗಳನ್ನು ತೆಗೆದುಕೊಂಡರೆ, ಅದನ್ನು ಸಾಧಿಸುವ ಜವಾಬ್ದಾರಿ ಸಂಘದ ಅಧಿಕಾರಿ-ಸಿಬ್ಬಂದಿಯ ಹೊಣೆಯಾಗಿರುತ್ತದೆ. ಸಹಕಾರ ಸಂಘಗಳು ಆಡಳಿತ ಸಂಘದ ವ್ಯವಹಾರದ ಗುರಿಯನ್ನು ಗುರುತಿಸಿ ಲಾಭ-ನಷ್ಟಗಳಿಗೆ ಅನುಗುಣವಾಗಿ ಸಂಘದ ಯಶಸ್ಸನ್ನು ಖಾತರಿಪಡಿಸುವ ರೀತಿಯಲ್ಲಿ ತೀರ್ಮಾನಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಉಪನಿರ್ದೇಶಕ ಹೆಚ್. ಮಂಜಪ್ಪ ಹೇಳಿದರು.

ಸಹಕಾರ ಇಲಾಖೆ ಗದಗ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಗದಗ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಕೆ.ಸಿ.ಸಿ ಬ್ಯಾಂಕ್ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗದಗ ಹಾಗೂ ನರಗುಂದ ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಒಂದು ದಿನದ ವಿಶೇಷ ಸಹಕಾರ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೆ.ಸಿ.ಸಿ. ಬ್ಯಾಂಕ್ ನಿರೀಕ್ಷಕರಾದ ಸುನೀಲಕುಮಾರ ಚಳಗೇರಿ ಮಾತನಾಡಿ, ಪ್ಯಾಕ್ಸ್ಗಳಲ್ಲಿ 2022ರಲ್ಲಿ ಜೂನ್ ಮಾಹೆಯಲ್ಲಿ ಕೇಂದ್ರ ಸರ್ಕಾರದ ಸಹಕಾರ ಇಲಾಖೆಯು ನ್ಯಾಷನಲ್ ಲೆವೆಲ್ ಪಿಎಸಿಎಸ್ ಸಾಫ್ಟ್‌ವೇರ್ ಜಾರಿಗೆ ತರುವ ಹೊಣೆಯನ್ನು ನಬಾರ್ಡ್ ಸಂಸ್ಥೆ ವಹಿಸಿಕೊಂಡಿದೆ. ಇದಕ್ಕೆ ಹಣಕಾಸಿನ ನೆರವನ್ನು ಕೇಂದ್ರ ಸರ್ಕಾರದ ಸಹಕಾರ ಇಲಾಖೆ ನೀಡುತ್ತದೆ. ಸಂಘದಿಂದ ಸಾಲಗಳ ಗುಣಮಟ್ಟವನ್ನು ಪರಿಶೀಲಿಸುವುದು, ಅದರಲ್ಲಿ ಕೃಷಿಗೆ ಅಲ್ಪಾವಧಿ ಬೆಳೆಸಾಲ, ಪಶುಸಂಗೋಪನೆ ಸಾಲ ಮತ್ತು ಕೃಷಿ ಮಧ್ಯಮಾವಧಿ ಸಾಲ ಈ ಎಲ್ಲ ಅಂಶಗಳನ್ನು ಉತ್ತಮವಾಗಿ ನಿರ್ವಹಿಸುವುದರಿಂದ ಸಂಘದ ಮೇಲೆ ಹೆಚ್ಚು ವಿಶ್ವಾಸ ಮೂಡುತ್ತದೆ ಎಂದರು.

ತರಬೇತಿ ಕಾರ್ಯಾಗಾರದಲ್ಲಿ ವ್ಹಿ.ಜಿ. ಕುಲಕರ್ಣಿ, ಅರವಿಂದ ಎನ್. ನಾಗಜ್ಜನವರ, ಪ್ರಶಾಂತ ಮುಧೋಳ ಉಪನ್ಯಾಸ ನೀಡಿದರು. ಅತಿಥಿಗಳಾಗಿ ಪ್ರಕಾಶ ನವಲಗುಂದ, ಎಸ್.ಎಂ. ಚಿಕ್ಕಮಠ, ಸುರೇಶಕುಮಾರ ಎಸ್., ಎಚ್.ಎಂ. ಮಳ್ಳಣ್ಣವರ ಉಪಸ್ಥಿತರಿದ್ದರು.

ಲಕ್ಕುಂಡಿ ನಂ.1 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಶರಣಪ್ಪ ಗರ್ಜಪ್ಪನವರ ಪ್ರಾರ್ಥಿಸಿದರು. ಗದಗ ಜಿಲ್ಲಾ ಸಹಕಾರ ಯೂನಿಯನ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಎಸ್. ಕರಿಯಪ್ಪನವರ ಸ್ವಾಗತಿಸಿದರು. ಯೂನಿಯನ್‌ನ ಮಹಿಳಾ ಸಹಕಾರ ಶಿಕ್ಷಕಿ ರಶೀದಾಬಾನು ಸಿ. ಯಲಿಗಾರ ನಿರೂಪಿಸಿದರು. ಪ್ರಭಾರ ವ್ಯವಸ್ಥಾಪಕ ಆರ್.ಎಸ್. ಕಲ್ಲನಗೌಡರ ವಂದಿಸಿದರು.

ಗದಗ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ವಾಯ್.ಎಫ್. ಪಾಟೀಲ ಮಾತನಾಡಿ, ಕೇಂದ್ರ ಸರ್ಕಾರದಲ್ಲಿ ಸಹಕಾರ ಸಚಿವಾಲಯ ಆರಂಭಗೊಂಡ ಮೇಲೆ ಭಾರತದ ಸಹಕಾರ ಚಳುವಳಿಯ ಸಬಲೀಕರಣಕ್ಕೆ ವಿಶೇಷ ಪ್ರಯತ್ನಗಳು ನಡೆಯುತ್ತಿವೆ. ಭಾರತದ ಅರ್ಥ ವ್ಯವಸ್ಥೆಯ ಪ್ರೇರಣೆಯಾಗಿರುವ ಸಹಕಾರಿ ವ್ಯವಸ್ಥೆ ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!