ವಿಜಯಸಾಕ್ಷಿ ಸುದ್ದಿ, ಗದಗ: ಸಮೀಪದ ತಿಮ್ಮಾಪೂರ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ವಿಜ್ರಂಭಣೆಯಿಂದ ನಡೆಯಿತು. ಬೆಳಿಗ್ಗೆ ಶ್ರೀದೇವರಿಗೆ ಪಂಚಾಮೃತ ಅಭಿಷೇಕ ಹಾಗೂ ಅನೇಕ ಪೂಜಾ ಕೈಂಕರ್ಯಗಳು ನಡೆದವು.
ಬೆಳಿಗ್ಗೆ 10 ಗಂಟೆಗೆ ಸಕಲ ಮಂಗಳ ವಾದ್ಯಗಳೊಂದಿಗೆ ಪಲ್ಲಕ್ಕಿಯಲ್ಲಿ ದೇವರನ್ನು ಕೂರಿಸಿ ಗಂಗಾ ಪೂಜೆ ಸಲ್ಲಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವದ ಮೂಲಕ ಸಂಚರಿಸಿ ಗುಡಿಯನ್ನು ತಲುಪಿತು. ಮಧ್ಯಾಹ್ನ ಮಹಾ ದಾಸೋಹದಲ್ಲಿ ನೂರಾರು ಭಕ್ತರು ಪ್ರಸಾದವನ್ನು ಸ್ವೀಕರಿಸಿದರು.
ರಾತ್ರಿ ಶಾಲಾ ಮಕ್ಕಳಿಂದ ಜಾನಪದ ರಸಮಂಜರಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ ಅವರು ದೇವಸ್ಥಾನಕ್ಕೆ ದೇಣಿಗೆ ನೀಡಿದ ದಾನಿಗಳಾದ ರಾಮಣ್ಣ ಕಂಕರಿ, ಮಾದೇವಪ್ಪ ಇದ್ಲಿ ಹನುಮಪ್ಪ ದೇವರವರ, ಶ್ರೀಕಾಂತ ಸೋಂಟಿ ರಾಮಣ್ಣ ಡಂಬಳ ನಾಗಪ್ಪ ಆಲೂರು, ಶರಣಪ್ಪ ಗಾಜಿ ಇವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಬೀರಲಿಂಗೇಶ್ವರ ಜಾತ್ರಾ ಕಮಿಟಿ ಸದಸ್ಯರಾದ ರಮೇಶ ಬನಾಪೂರ, ಬಸಪ್ಪ ದೇವರವರ, ಶಿವಾನಂದ ಡಂಬಳ, ಚಂದ್ರು ಆಲೂರ, ಹನುಮಪ್ಪ ಬಿಚಗಲ್ಲ, ಮಾರುತಿ ಕಟಗಿ, ಬಸವರಾಜ ಇದ್ಲಿ, ಮಂಜುನಾಥ ಕೊಪ್ಪಳ, ಶ್ರೀಕಾಂತ ಬಾಬರಿ, ಮಾರುತಿ ಹಚ್ಚಪ್ಪನವರ, ಬೀರಪ್ಪ, ಬಂಡಿಹಾಳ, ಮಲ್ಲಪ್ಪ ಡಂಬಳ, ಬೀರಪ್ಪ ಬನಾಪೂರ, ಪ್ರಕಾಶ ಯತ್ನಟ್ಟಿ ಮುಂತಾದವರಿದ್ದರು.



