ಕೊಪ್ಪಳ:- ಕೊಪ್ಪಳದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ಕಳ್ಳರನ್ನು ಹಿಡಿದು ಮಟ್ಟ ಹಾಕಬೇಕಿದ್ದ ಪೊಲೀಸಪ್ಪನೇ ರಾತ್ರಿ ಡ್ಯೂಟಿ ವೇಳೆ ಹಾಲು ಕದ್ದಿರುವ ಘಟನೆ ಜರುಗಿದೆ.
Advertisement
ಡಿವೈಎಸ್ಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಹೆಡ್ ಕಾನ್ಸಟೇಬಲ್ ಶಿವಾನಂದ್ ಅವರು ಆಗಸ್ಟ್ 29 ರಂದು ರಾತ್ರಿ ಕರ್ತವ್ಯದ ವೇಳೆ ಹಾಲು ಕದ್ದಿದ್ದಾರೆ. ಆಗಸ್ಟ್ 29ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸದ್ಯ ಹಾಲು ಕದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೈಕ್ನಲ್ಲಿ ಬಂದ ಹೆಡ್ ಕಾನ್ಸಟೇಬಲ್ ಹಾಲಿನ ಡೈರಿ ಬಳಿ ಬೈಕ್ ನಿಲ್ಲಿಸಿ ಅತ್ತ ಇತ್ತ ಓಡಾಡಿ ಬಳಿಕ ಕ್ರೇಟ್ನಿಂದ ಅರ್ಧ ಲೀಟರ್ನ 2 ಪ್ಯಾಕೇಟ್ ಹಾಲು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
ಕಾಯುವವರೇ ಕಳ್ಳರಾದರೇ ಹೇಗೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಇನ್ನು ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.