Bengaluru: ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದ ಹಿಜಾಬ್ ವಿವಾದ

0
Spread the love

ಬೆಂಗಳೂರು;- ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಮತ್ತೆ ಹಿಜಾಬ್ ವಿವಾದ ಮುನ್ನೆಲೆಗೆ ಬಂದಿದೆ. ಮತ್ತೊಂದು ಧರ್ಮ ದಂಗಲಗೆ ಸಾಕ್ಷಿ ಆಗುತ್ತಾ ಕರ್ನಾಟಕ ಎಂಬ ಪ್ರಶ್ನೆ ಮೂಡಿದೆ. ಕಳೆದ ಐದಾರು ತಿಂಗಳಿಂದ ಹಿಜಾಬ್ ವಿಚಾರ ತಣ್ಣಗಾಗಿತ್ತು. ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾಗಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದಿಂದ ಅನುಮತಿ ನೀಡಲಾಗಿತ್ತು.

Advertisement

ಕರ್ನಾಟಕದಲ್ಲಿ ಹಿಜಾಬ್ ಧರಿಸಿ ಶಾಲಾ-ಕಾಲೇಜುಗಳಿಗೆ ಹೋಗುವ ವಿಚಾರದಲ್ಲಿ ಈ ಹಿಂದೆ ಸಾಕಷ್ಟು ಗಲಾಟೆಗಳು ನಡೆದಿತ್ತು. ಆದರೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಿದೆ. ಇದೇ ತಿಂಗಳು ಅಕ್ಟೋಬರ್ 28 ಮತ್ತು 29 ರಂದು ವಿವಿಧ ನಿಗಮ ಮಂಡಳಿಗಳ ಹುದ್ದೆಗಳ ಭರ್ತಿಗೆ ಪರೀಕ್ಷೆಗಳು ನಡೆಯಲಿದೆ. ಈ ಪರೀಕ್ಷೆಗಳಿಗೆ ಹಿಜಾಬ್ ಧರಿಸಿ ಅಭ್ಯರ್ಥಿಗಳು ಹಾಜರಾಗಬಹುದು ಎಂದು ತಿಳಿಸಿದೆ. ಆದ್ರೆ ಇದಕ್ಕೆ ಕಂಡಿಷನ್ ಒಂದು ಹಾಕಿದೆ,

ಹಿಜಾಬ್ ದರ್ಸಿಕೊಂಡು ಬಂದ್ರೆ ಎರಡು ಗಂಟೆ ಮೊದಲು ಬರಬೇಕೆಂದು ಸೂಚನೆ ನೀಡಲಾಗಿದೆ. ಭದ್ರತೆ ದೃಷ್ಟಿಯಿಂದ ಈ ಒಂದು ಆದೇಶ ಮಾಡಲಾಗಿದೆ. ಹಾಗೆಯೇ ಜೀನ್ಸ್ ಪ್ಯಾಂಟ್ ಹಾಗೂ ಫುಲ್ ತೋಳು ಶರ್ಟ್ ಸಹ ಹಾಕುವಂತಿಲ್ಲ. ಹಾಗೆಯೇ ಇನ್ನು ಹಲವು ಶರತು ಹಾಕಿದೆ.

ಆದ್ರೆ ಇದಕ್ಕೆ ಸಾಕಷ್ಟು ವಿರೋಧ ಸಹ ವ್ಯಕ್ತ ಆಗುತ್ತಿದೆ. ಆದ್ರೆ ಯಾಕೇ ಈ ತಾರತಮ್ಯ ಅಂತಾ ಕೇಳ್ತಿದ್ದಾರೆ ಸಾರ್ವಜನಿಕರು. ಒಟ್ಟಲ್ಲಿ KEA ನಿರ್ಧಾರಕ್ಕೆ ಜನರು ಆಕ್ರೋಶಗೋ0ಡಿದ್ದಾರೆ
ಇನ್ನು ಪರೀಕ್ಷೆ ಗೆ ಸಮಯವಿದೆ ಸರ್ಕಾರ ಇನ್ನಾದರೂ ಈ ಹಿಜಾಬ್ ವಿಚಾರ ಕೈ ಬಿಡುತ್ತಾ? ಅಥವಾ ಹಾಗೇ ಮತ್ತೊಂದು ಧರ್ಮ ದಂಗಲ ನಲ್ಲಿ ಈ ಪರೀಕ್ಷೆ ನಡೆಯುತ್ತಾ? ಎಂಬ ಪ್ರಶ್ನೆ ಮೂಡಿದೆ.


Spread the love

LEAVE A REPLY

Please enter your comment!
Please enter your name here