ವಿಜಯಸಾಕ್ಷಿ ಸುದ್ದಿ, ಗದಗ: ದಿ. ಕೆ.ಎಚ್. ಪಾಟೀಲರು ಸಹಕಾರಿ ರಂಗದಲ್ಲಿ ಮಾಡಿರುವ ಸೇವೆಯನ್ನು ಗುರುತಿಸಿ ಸಮಾಜವು ಅವರನ್ನು ಸಹಕಾರಿ ರಂಗದ ಭೀಷ್ಮ ಎಂದು ಗೌರವದಿಂದ ಕರೆಯುತ್ತಿದೆ. ಅವರ ಸೇವೆಯನ್ನು ಈ ನಾಡು ಮರೆತಿಲ್ಲ ಎನ್ನುವುದಕ್ಕೆ ಇಂದು ಅವರ ಜನ್ಮಶತಮಾನೋತ್ಸವವನ್ನು ಅವರ ಅಭಿಮಾನಿಗಳು ಹಾಗೂ ಗದುಗಿನ ಜನತೆ ಹೆಮ್ಮೆಯಿಂದ ಆಚರಿಸುತ್ತಿರುವುದೇ ಸಾಕ್ಷಿಯಾಗಿದೆ ಎಂದು ನಗರಸಭಾ ಹಿರಿಯ ಸದಸ್ಯ ಕೃಷ್ಣಾ ಪರಾಪೂರ ಹೇಳಿದರು.
ದಿ. ಕೆ.ಎಚ್. ಪಾಟೀಲರ ಜನ್ಮಶತಮಾನೋತ್ಸವದ ಅಂಗವಾಗಿ ಗದಗ ಜಿಲ್ಲಾ ಆಟೋ ಚಾಲಕ-ಮಾಲಕರ ಸಂಘದಿಂದ ಹಮ್ಮಿಕೊಂಡಿದ್ದ ಆಟೋಗಳ ಬೃಹತ್ ಮೆರವಣೆಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಮನಗುಂಡಿ ಮಾತನಾಡಿ, ಗದಗ ಜಿಲ್ಲಾ ಆಟೋ ಚಾಲಕ-ಮಾಲಕರ ಸಂಘದಿAದ ಸುಮಾರು 300ಕ್ಕೂ ಹೆಚ್ಚು ಆಟೋ ಚಾಲಕರು ತಮ್ಮ ಆಟೋಗಳ ಮೇಲೆ ದಿ. ಕೆ.ಎಚ್. ಪಾಟೀಲರರ ಫೋಟೋಗಳನ್ನು ಅಳವಡಿಸಿಕೊಂಡು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಶ್ರೀಯುತರ ಜನ್ಮಶತಮಾನೋತ್ಸವವನ್ನು ಇತಿಹಾಸದ ಪುಟಗಳಲ್ಲಿ ಅಜರಾಮರವಾಗುವಂತೆ ಮಾಡುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ವಿಜಯ ಕಲ್ಮನಿಯವರ ಮಾರ್ಗದರ್ಶನದಲ್ಲಿ ಮಂಜುನಾಥ ಅಗಸಿಮನಿ, ಗಂಗಾಧರ ಬ್ಯಾಗೋಟಿ, ಈರಣ್ಣ ಗೆಜ್ಜೆಳ್ಳಿ, ಮೋಹನ ಶಿಂಗಾಡಿ, ಉದಯ ಪನ್ನೂರ, ಹೇಮಂತ ಕಾಳೆ, ಮಲ್ಲಿಕಾರ್ಜುನ ಸಂಗಾಪೂರ, ಮಹಾದೇವ ಛಲವಾದಿ, ರಫೀಕ ಮುಳಗುಂದ, ಅಯ್ಯಪ್ಪ ಭಂಡಾರಿ, ಮೋಹನ ಛಲವಾದಿ, ಬಸವರಾಜ ಹುಲ್ಲೂರ, ನಾಗರಾಜ ಗುಳೇದಗುಡ್ಡ, ಗೋಪಾಲ ಗೋರ್ಲೆ, ಶಫಿ ಅತ್ತಾರ, ಬಸವರಾಜ ಗಾಮನಗಟ್ಟಿ, ಯಮನೂರ ಕಾಳಗಿ, ಜೀವನ್ ಪರಾಪೂರ, ಲಕ್ಷö್ಮಣ ಕಟ್ಟಿಮನಿ, ವಿಜಯೇಂದ್ರ ವಡವಿ, ರಾಜು ಮುಲ್ಲಾನವರ, ಮಂಜು ಪೂಜಾರ, ಮಂಜುನಾಥ ಬಳ್ಳಾರಿ ಸೇರಿದಂತೆ ಹೊಸ ಬಸ್ ನಿಲ್ದಾಣ, ಹಳೆ ಬಸ್ ನಿಲ್ದಾಣ, ಮುಳಗುಂದ ನಾಕಾ, ಜಿಲ್ಲಾಸ್ಪತ್ರೆ, ಗಾಂಧಿ ಸರ್ಕಲ್ ಆಟೋ ನಿಲ್ದಾಣಗಳ ಆಟೋ ಚಾಲಕರು ಭಾಗವಹಿಸಿದ್ದರು.