ಕಾನೂನು ಎಲ್ಲರಿಗೂ ಒಂದೇ, ನನ್ನ ಮಾತ್ರ ಅರೆಸ್ಟ್ ಮಾಡಿದ್ದು ಯಾಕೆ? – ಡ್ರೋನ್ ಪ್ರತಾಪ್ ಪ್ರಶ್ನೆ!

0
Spread the love

ತುಮಕೂರು:- ಕಾನೂನು ಎಲ್ಲರಿಗೂ ಒಂದೇ, ನನ್ನ ಮಾತ್ರ ಅರೆಸ್ಟ್ ಮಾಡಿದ್ದು ಯಾಕೆ? ಎಂದು ಡ್ರೋನ್ ಪ್ರತಾಪ್ ಪ್ರಶ್ನೆ ಮಾಡಿದ್ದಾರೆ.

Advertisement

ನೀರಲ್ಲಿ ಸೋಡಿಯಂ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನಿಂದ ಜಾಮೀನಿನ ಮೇಲೆ ಡ್ರೋನ್ ಪ್ರತಾಪ್ ಹೊರ ಬಂದಿದ್ದಾರೆ. ಬಳಿಕ ಮಾತನಾಡಿದ ಅವರು, ಬೇರೆ ಎಲ್ಲರನ್ನೂ ಬಿಟ್ಟು ತಮ್ಮನ್ನು ಮಾತ್ರ ಅರೆಸ್ಟ್ ಮಾಡಿದ್ದು ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ.

ನನ್ನದು ಒಂದೇ ಪ್ರಶ್ನೆ. ದೇಶಾದ್ಯಂತ ಇದೇ ಸೋಡಿಯಂ ಬಳಸಿ ವಿಜ್ಞಾನದ ನೂರಾರು ಪ್ರಯೋಗ ಮಾಡಿದ್ದಾರೆ. ವಿಡಿಯೋ ಪೋಸ್ಟ್ ಮಾಡಿದ್ದಾರೆ. ಮೊಬೈಲ್ ಕೊಟ್ಟರೆ ತೋರಿಸುತ್ತೇನೆ. ಹಾಗಾದರೆ ಅವರನ್ನೆಲ್ಲ ಯಾಕೆ ಅರೆಸ್ಟ್ ಮಾಡಿಲ್ಲ? ನನ್ನ ಒಬ್ಬನನ್ನು ಮಾತ್ರ ಯಾಕೆ ಅರೆಸ್ಟ್ ಮಾಡಿದ್ದಾರೆ?’ ಎಂದು ಡ್ರೋನ್ ಪ್ರತಾಪ್ ಅವರು ಪ್ರಶ್ನೆ ಮಾಡಿದ್ದಾರೆ.

ನಮ್ಮ ದೇಶದಲ್ಲಿ ಆಗಿರಬಹುದು ಅಥವಾ ವಿದೇಶದಲ್ಲಿ ಆಗಿರಬಹುದು, ತುಂಬ ಜನ ಯೂಟ್ಯೂಬರ್​ಗಳು ಇದನ್ನು ಮಾಡಿದ್ದಾರೆ. ಐಪಿಸಿ ಎಂಬುದು ದೇಶದಲ್ಲಿ ಎಲ್ಲರಿಗೂ ಒಂದೇ. ಕಾನೂನು ಎಲ್ಲರಿಗೂ ಒಂದೇ. ಒಬ್ಬೊಬ್ಬರಿಗೆ ಒಂದೊಂದು ಥರ ಅಲ್ಲ. ಬೇರೆಯವರೆಲ್ಲ ಕೆಜಿಗಟ್ಟಲೆ ಸೋಡಿಯಂ ಬಳಸಿ ಪ್ರಯೋಗ ಮಾಡಿದ್ದಾರೆ. ಆದರೆ ನನ್ನನ್ನು ಮಾತ್ರ ಅರೆಸ್ಟ್ ಮಾಡಿದ್ದು ಯಾಕೆ’ ಎಂದು ಡ್ರೋನ್ ಪ್ರತಾಪ್ ಕೇಳಿದ್ದಾರೆ.

ಕ್ರೇಜಿ ಎಕ್ಸ್​ವೈಜಡ್​, ಮಿಸ್ಟರ್​ ಹ್ಯಾಕರ್​ ಹಾಗೂ ಸಾಕಷ್ಟು ಜನ ಯೂಟ್ಯೂಬರ್​ಗಳು ಇಂಥ ಪ್ರಯೋಗ ಮಾಡಿದ್ದಾರೆ. ಇಂಥ ಯಾರ ಮೇಲೂ ಕೇಸ್ ಮಾಡಿಲ್ಲ. ನನ್ನ ಮೇಲೆ ಮಾತ್ರ ಕ್ರಮ ಕೈಗೊಂಡಿದ್ದಕ್ಕೆ ಉದ್ದೇಶ ಏನು ಎಂಬುದು ನೀವೇ ಹುಡುಕಬೇಕು. ನಾನು ಆ ಪ್ರಯೋಗ ಮಾಡಿದ್ದು ವಿಜ್ಞಾನ ಮತ್ತು ಶಿಕ್ಷಣದ ಉದ್ದೇಶಕ್ಕೆ ಅಂತ ಸೂಚನೆ ನೀಡಿಯೇ ಆ ವಿಡಿಯೋ ಹಾಕಿದ್ದೇನೆ’ ಎಂದು ಡ್ರೋನ್ ಪ್ರತಾಪ್ ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here