ಹಣಕಾಸು ವಿಚಾರಕ್ಕೆ ಮೇಸ್ತ್ರಿಯನ್ನೇ ಕತ್ತು ಕೊಯ್ದು ಬರ್ಬರ ಹತ್ಯೆ.!

0
Spread the love

ಮಂಡ್ಯ: ಮನೆ ನಿರ್ಮಾಣದ ಮೇಸ್ತ್ರಿಯೋರ್ವರನ್ನು ದುಷ್ಕರ್ಮಿಗಳು ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಈ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ನಡೆದಿದೆ. ಹಣಕಾಸಿನ ವಿಚಾರಕ್ಕೆ ಸಹ ಕೆಲಸಗಾರ ಕಬ್ಬನಹಳ್ಳಿಯ ರವಿ ಎಂಬ ವ್ಯಕ್ತಿಯೇ ಕೆಲಸ ನೀಡಿ,

Advertisement

ಅನ್ನಕ್ಕೆ ದಾರಿ ಮಾಡಿಕೊಟ್ಟಿದ್ದ ಮೇಸ್ತ್ರಿ ಮಂಟೇಸ್ವಾಮಿಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ ಇವರಿಬ್ಬರ ನಡುವೆ ಹಣದ ವಿಚಾರಕ್ಕೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಮನೆಯಲ್ಲಿದ್ದ ಮಂಟೇಸ್ವಾಮಿ ಅವರನ್ನು ಹೊರಗೆ ಮಾತುಕತೆಗೆಂದು ಕರೆದುಕೊಂಡು ಬಂದು ರವಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

 


Spread the love

LEAVE A REPLY

Please enter your comment!
Please enter your name here